ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ರವಾ ಹಲ್ವಾ

ಕೊರೊನಾ, ರೋಗ ನಿರೋಧಕ ಶಕ್ತಿ ಮಹತ್ವವನ್ನು ತಿಳಿಸಿದೆ. ಈ ವೈರಸ್ ನಂತರ ಜನರು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಷಾಯ ಸೇರಿದಂತೆ ತರಕಾರಿ, ಹಣ್ಣಿನ ಸೇವನೆ ಮಾಡ್ತಿದ್ದಾರೆ. ಅನೇಕರು ಇಷ್ಟಪಟ್ಟು ಸೇವನೆ ಮಾಡುವ ರವೆ ಹಲ್ವಾ ಕೂಡ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ರವೆ ಹಲ್ವಾ ಮಾಡುತ್ತಾರೆ. ಆದ್ರೆ ಇದ್ರಲ್ಲಿ ರೋಗ ನಿರೋಧಕ ಶಕ್ತಿ ಇದೆ ಎಂಬುದು ಅನೇಕರಿಗೆ ಗೊತ್ತಿಲ್ಲ. ರವೆಯನ್ನು ತುಪ್ಪದಲ್ಲಿ ಹುರಿಯಲಾಗುತ್ತದೆ. ತುಪ್ಪ ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಅದರಲ್ಲಿರುವ ಉರಿಯೂತದ ಗುಣಗಳು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಇದರೊಂದಿಗೆ ಕ್ಯಾನ್ಸರ್ ವಿರುದ್ಧ ಹೋರಾಡುವ ಅಂಶಗಳೂ ಇದರಲ್ಲಿ ಕಂಡುಬರುತ್ತವೆ.

ರವೆಯಲ್ಲಿ ಕಬ್ಬಿಣ ಮತ್ತು ಮೆಗ್ನೀಸಿಯಮ್ ಇದೆ. ಇದು ಹೃದಯದ ಆರೋಗ್ಯ ವೃದ್ಧಿಸುತ್ತದೆ. ರವೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಆದ್ರೆ ಹೆಚ್ಚಿನ ಮಟ್ಟದಲ್ಲಿ ರವೆ ಸೇವನೆ ಮಾಡುವುದ್ರಿಂದ ಅನಾರೋಗ್ಯ ಕಾಡುತ್ತದೆ.

ಯಾವಾಗಲೂ ದೇಸಿ ತುಪ್ಪದಲ್ಲಿ ಹಲ್ವಾ ಮಾಡಬೇಕು. ಮಧುಮೇಹ ರೋಗಿಗಳು ಈ ಹಲ್ವಾವನ್ನು ಸೇವಿಸಬಾರದು. ಇದನ್ನು ಸೇವಿಸಿದ ನಂತ್ರ ಬೆಚ್ಚಗಿನ ನೀರನ್ನು ಕುಡಿಯಿರಿ. ಕಡಿಮೆ ಸಕ್ಕರೆ ತಿನ್ನುವವರು ಹಲ್ವಾಕ್ಕೆ ಬೆಲ್ಲ ಅಥವಾ ಕಂದು ಸಕ್ಕರೆಯನ್ನು ಬಳಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read