KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಬಿಪಿಎಲ್ ಕಾರ್ಡ್ ದಾರರಿಗೆ ಬಿಗ್ ಶಾಕ್: 14 ಲಕ್ಷಕ್ಕೂ ಅಧಿಕ ಖಾತೆಗೆ ಜಮಾ ಆಗದ ಹಣ

Published August 22, 2023 at 8:25 am
Share
SHARE

ಬೆಂಗಳೂರು: ತಾಂತ್ರಿಕ ಸಮಸ್ಯೆಯಿಂದಾಗಿ 14 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ ದಾರರಿಗೆ ಅನ್ನಭಾಗ್ಯ ಯೋಜನೆಯ ಹಣ ಪಾವತಿಯಾಗಿಲ್ಲ ಎಂದು ಹೇಳಲಾಗಿದೆ.

ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ದಾರರಿಗೆ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ರಾಜ್ಯದಲ್ಲಿ 1.27 ಕೋಟಿ ಅಧಿಕ ಅರ್ಹ ಕಾರ್ಡ್ ಗಳಿವೆ. ಇವುಗಳಲ್ಲಿ 1,03,68,897 ಕಾರ್ಡ್ ಗಳಿಗೆ 605.90 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ.

ಬ್ಯಾಂಕ್ ಖಾತೆ ಸಮಸ್ಯೆ ಸೇರಿದಂತೆ ಇತರೆ ಕೆಲವು ತಾಂತ್ರಿಕ ದೋಷಗಳ ಕಾರಣದಿಂದ ರಾಜ್ಯಾದ್ಯಂತ ಸುಮಾರು 14 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ ದಾರರ ಖಾತೆಗೆ ಹಣ ಪಾವತಿಯಾಗಿಲ್ಲ. ಇದರಿಂದಾಗಿ ಅನ್ನಭಾಗ್ಯ ಯೋಜನೆಯ ಹಣದಿಂದ ಈ ಕಾರ್ಡ್ ದಾರರು ವಂಚಿತರಾಗಿದ್ದಾರೆ. ಕಳೆದ ತಿಂಗಳು 21 ಲಕ್ಷ ಕಾರ್ಡ್ ಗಳಿಗೆ ತಾಂತ್ರಿಕ ಸಮಸ್ಯೆಯ ಕಾರಣ ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿರಲಿಲ್ಲ.

ಇವುಗಳಲ್ಲಿ 7 ಲಕ್ಷ ಕಾರ್ಡುಗಳ ತಾಂತ್ರಿಕ ಸಮಸ್ಯೆ ಪರಿಹರಿಸಲಾಗಿದ್ದು, ಉಳಿದ 14 ಲಕ್ಷ ಕಾಡ್ಡ್ ಗ ಸಮಸ್ಯೆಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿ ಹಂತ ಹಂತವಾಗಿ ಬಗೆಹರಿಸಿ ಖಾತೆಗೆ ಹಣ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

ಕಳೆದ ತಿಂಗಳು ಜಿಲ್ಲಾವಾರು ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದ್ದು, ಈ ಬಾರಿ ಏಕಕಾಲಕ್ಕೆ ಹಣ ವರ್ಗಾವಣೆ ಮಾಡಲಾಗುವುದು.

1.27 ಕೋಟಿ ಗೂ ಅಧಿಕ ಬಿಪಿಎಲ್ ಕಾರ್ಡ್ ಗಳಲ್ಲಿ ಸುಮಾರು 8 ಲಕ್ಷ ಪಡಿತರ ಚೀಟಿದಾರರು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಪಡೆಯದ ಕಾರಣ ಅವರನ್ನು ಸೌಲಭ್ಯದಿಂದ ಕೈಬಿಡಲಾಗಿದೆ. ಮೂರು ತಿಂಗಳಿಂದ ರೇಷನ್ ಪಡೆಯದ ಕಾರ್ಡ್ ದಾರರು ಅನ್ನಭಾಗ್ಯ ಯೋಜನೆ ನಗದು ವರ್ಗಾವಣೆ ಸೌಲಭ್ಯದಿಂದ ಅನರ್ಹರಾಗುತ್ತಾರೆ.

ಅಂತ್ಯೋದಯ ಕಾರ್ಡ್ ಗಳಲ್ಲಿ ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿದ್ದರೆ ಅಂತವರನ್ನು ಹೊರಗಿಡಲಾಗಿದೆ. ಮೂರಕ್ಕಿಂತ ಹೆಚ್ಚು ಸದಸ್ಯರಿದ್ದರೆ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.

ಕೆಲವರಿಗೆ ಖಾತೆ ಇಲ್ಲ, ಮತ್ತೆ ಕೆಲವರ ಖಾತೆ ನಿಷ್ಕ್ರಿಯವಾಗಿವೆ, ಕೆಲವರು ತಪ್ಪಾದ ಆಧಾರ್ ಸಂಖ್ಯೆ ನೀಡಿದ್ದಾರೆ. ಪಡಿತರೆ ಚೀಟಿಗೆ ಕೆಲವರ ಆಧಾರ್ ಲಿಂಕ್ ಮಾಡಿಲ್ಲ, ರಾಷ್ಟ್ರೀಯ ಮಾಹಿತಿ ಕೇಂದ್ರದ ದತ್ತಾಂಶ ಇಲ್ಲದಿರುವುದು ಸೇರಿದಂತೆ ಹಲವು ಕಾರಣಗಳಿಂದ ಅನ್ನ ಭಾಗ್ಯದ ಹಣ ಖಾತೆಗೆ ಪಾವತಿಯಾಗಿಲ್ಲ. ಆಹಾರ ಇಲಾಖೆ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದು ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.

You Might Also Like

BREAKING : ರಾಜ್ಯದಲ್ಲಿ ಘೋರ ದುರಂತ : ಸಾಲಭಾದೆಯಿಂದ ಬೇಸತ್ತು ತಂದೆ-ಮಗ ಆತ್ಮಹತ್ಯೆ, ತಾಯಿ ಸ್ಥಿತಿ ಗಂಭೀರ.!

‘ಆಪರೇಷನ್ ಸಿಂಧೂರ್’ ಯಶಸ್ಸು: ಭಾರತದ ʼಬ್ರಹ್ಮೋಸ್ʼ ಕ್ಷಿಪಣಿ ಖರೀದಿಗೆ ಮುಗಿಬಿದ್ದ 17 ರಾಷ್ಟ್ರಗಳು !

ಕಾರವಾರ ಬಂದರಿಗೆ ಬಂದ ಪಾಕಿಸ್ತಾನ, ಸಿರಿಯಾ ಪ್ರಜೆಗಳಿಗೆ ಹಡಗಿನಲ್ಲಿಯೇ ದಿಗ್ಬಂಧನ!

BREAKING : ಕರ್ನಲ್ ಸೋಫಿಯಾ ಬಗ್ಗೆ ವಿವಾದಾತ್ಮಕ ಹೇಳಿಕೆ : ‘FIR’ ರದ್ದುಕೋರಿ ‘ಸುಪ್ರೀಂ’ ಮೊರೆ ಹೋದ ಸಚಿವ ವಿಜಯ್ ಶಾ.!

BIG NEWS : ‘ರಾಜ್ಯ ಸರ್ಕಾರಿ’ ನೌಕರರಿಗೆ ವಿಶೇಷ ವೇತನ ಬಡ್ತಿ ಮಂಜೂರಾತಿ : ಸರ್ಕಾರದಿಂದ ಮಹತ್ವದ ಆದೇಶ.!

TAGGED:Moneyaccountತಾಂತ್ರಿಕ ಸಮಸ್ಯೆRation cardಅನ್ನಭಾಗ್ಯ ಯೋಜನೆಖಾತೆಗೆ ಹಣಬಿಪಿಎಲ್ ಕಾರ್ಡ್ ದಾರರುAnnabhagya
Share This Article
Facebook Copy Link Print

Latest News

BREAKING : ರಾಜ್ಯದಲ್ಲಿ ಘೋರ ದುರಂತ : ಸಾಲಭಾದೆಯಿಂದ ಬೇಸತ್ತು ತಂದೆ-ಮಗ ಆತ್ಮಹತ್ಯೆ, ತಾಯಿ ಸ್ಥಿತಿ ಗಂಭೀರ.!
‘ಆಪರೇಷನ್ ಸಿಂಧೂರ್’ ಯಶಸ್ಸು: ಭಾರತದ ʼಬ್ರಹ್ಮೋಸ್ʼ ಕ್ಷಿಪಣಿ ಖರೀದಿಗೆ ಮುಗಿಬಿದ್ದ 17 ರಾಷ್ಟ್ರಗಳು !
ಕಾರವಾರ ಬಂದರಿಗೆ ಬಂದ ಪಾಕಿಸ್ತಾನ, ಸಿರಿಯಾ ಪ್ರಜೆಗಳಿಗೆ ಹಡಗಿನಲ್ಲಿಯೇ ದಿಗ್ಬಂಧನ!
BREAKING : ಕರ್ನಲ್ ಸೋಫಿಯಾ ಬಗ್ಗೆ ವಿವಾದಾತ್ಮಕ ಹೇಳಿಕೆ : ‘FIR’ ರದ್ದುಕೋರಿ ‘ಸುಪ್ರೀಂ’ ಮೊರೆ ಹೋದ ಸಚಿವ ವಿಜಯ್ ಶಾ.!

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮುಂದಿನ ತಿಂಗಳಿಂದ ‘ಅನ್ನಭಾಗ್ಯ ಯೋಜನೆ’ಯಡಿ ಉಚಿತವಾಗಿ ಅಕ್ಕಿ ಜತೆಗೆ ರಾಗಿ, ಜೋಳ ವಿತರಣೆ
ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
SHOCKING : ರಾಜ್ಯದಲ್ಲಿ ಆಘಾತಕಾರಿ ಘಟನೆ : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ‘KSRTC’ ಬಸ್ ಕಂಡಕ್ಟರ್.!

Automotive

BIG NEWS: ಎಲೆಕ್ಟ್ರಾನಿಕ್‌ ವಾಹನಗಳ ಬಳಕೆ ಉತ್ತೇಜಿಸಲು ಮಹತ್ವದ ಕ್ರಮ ; ಆಮದು ಸುಂಕ ಶೇ.110 ರಿಂದ ಶೇ.15 ಕ್ಕೆ ಇಳಿಕೆಗೆ ಕ್ರಮ
ಕಾರು ಚಾಲಕನ ಹುಚ್ಚಾಟ ; ಡಿವೈಡರ್ ಮೇಲೆ ಚಲಾಯಿಸಿದ ವಿಡಿಯೋ ವೈರಲ್ | Watch
BMW ಕಾರಿನಲ್ಲಿ ಬಂದವರಿಂದ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ; ಪೊಲೀಸರಿಂದ ಮೆರವಣಿಗೆ | Watch

Entertainment

75 ಲಕ್ಷ ರೂ.ನಲ್ಲಿ ತಯಾರಾಗಿ ಥಿಯೇಟರ್‌ಗೆ ಬರದೇ ಕೋಟಿ ಕೋಟಿ ಗಳಿಸಿದ ಸಿನಿಮಾ ಯಾವುದು ? ನಾಯಕ – ನಾಯಕಿ ಯಾರು…? ತಿಳಿದುಕೊಳ್ಳಿ
ದೇಶ ವಿರೋಧಿ ಹೇಳಿಕೆ: ಕಿರುತೆರೆ ಖ್ಯಾತ ನಟ ಅಖಿಲ್ ವಿರುದ್ಧ ಪ್ರಕರಣ ದಾಖಲು
ಖಾಸಗಿ ವಿಡಿಯೋ ಲೀಕ್ : ಮತ್ತೆ ಮೌನ ಮುರಿದ ನಟಿ ಶ್ರುತಿ ನಾರಾಯಣ್ !

Sports

ವಿಕೆಟ್‌ ಕೀಪರ್ ಎಡವಟ್ಟು ; ಬಾಂಗ್ಲಾ ತಂಡಕ್ಕೆ ಭಾರೀ ದಂಡ | Watch Video
‘IPL’ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಲೀಗ್ ಪುನಾರಂಭದ ದಿನಾಂಕ ಬಿಡುಗಡೆ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ |IPL 2025
BIG UPDATE : ಭಾರತ-ಪಾಕ್ ನಡುವೆ ಉದ್ವಿಗ್ನತೆ : ‘IPL’ ಟೂರ್ನಿ 1 ವಾರ ಮಾತ್ರ ಮುಂದೂಡಿಕೆ

Special

ಹರಳೆಣ್ಣೆ: ಮನೆಮದ್ದುಗಳ ರಾಣಿ, ಆರೋಗ್ಯಕ್ಕೆ ವರದಾನ….!
ʼಈರುಳ್ಳಿʼ ಕತ್ತರಿಸುವಾಗ ಕಣ್ಣು ಉರಿಯುತ್ತಿದೆಯೇ ? ಇಲ್ಲಿದೆ ಪರಿಹಾರ
ಮೆನೋಪಾಸ್ ಒಂದು ನೈಸರ್ಗಿಕ ಪ್ರಕ್ರಿಯೆ; ಈ ಸಮಯದಲ್ಲಿ ಮಹಿಳೆಯರು ಎದುರಿಸುವ ಸಾಮಾನ್ಯ ಸಮಸ್ಯೆಗಳಿವು…!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?