ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಬೆನ್ನಲ್ಲೇ ಭಾರತ ಸಿಂಧೂ ನದಿ ಒಪ್ಪಂದವನ್ನು ರದ್ದುಪಡಿಸುವ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಚಿನಾಬ್ ನದಿ ನೀರನ್ನು ಬಂದ್ ಮಾಡಲಾಗಿದೆ.
ಚಿನಾಬ್ ನದಿಯ ರಂಬನ್ ಹಾಗೂ ಸಲಾಲ್ ಡ್ಯಾಂಗ್ ಗಳ ಎಲ್ಲಾ ಗೇಟ್ ಗಳನ್ನು ಭಾರತ ಮುಚ್ಚಿದ್ದು, ಪಾಕಿಸ್ತಾನದತ್ತ ನೀರು ಹರಿಯುತ್ತಿಲ್ಲ ಎಂದು ಇಲ್ಲಿನ ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸಲಾಲ್ ಡ್ಯಾಂ ನ ಒಂದು ಗೇಟ್ ಓಪನ್ ಇದ್ದು, ತಾಂತ್ರಿಕ ಕಾರಣಕ್ಕೆ ಈ ಒಂದು ಗೇಟ್ ತೆರೆಯಲಾಗಿದ್ದು, ಮುಂದಿನ ದಿನಗಳಲ್ಲಿ ಅದನ್ನು ಮುಚ್ಚಲಾಗುವುದು ಎಂದು ತಿಳಿಸಿದ್ದಾರೆ.
ಈ ಡ್ಯಾಮ್ ಗಳಿಂದ ಹರಿಯುವ ನೀರನ್ನು ಪಾಕಿಸ್ತಾನ ಕೃಶಿ ಹಾಗೂ ಜಲ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.