ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಚಿವರಿಂದ ಶುಭ ಸುದ್ದಿ: ಸಾರಿಗೆ ನಿಗಮಗಳಲ್ಲಿ 13 ಸಾವಿರ ಹುದ್ದೆಗಳ ನೇಮಕಾತಿ

ಬೆಂಗಳೂರು: ರಾಜ್ಯದ 4 ಸಾರಿಗೆ ನಿಗಮಗಳಲ್ಲಿ 13,000 ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

13,000 ಹುದ್ದೆಗಳ ನೇಮಕಾತಿ ಸಂಬಂಧ ಪ್ರಸ್ತಾವನೆ ಆರ್ಥಿಕ ಇಲಾಖೆ ಮುಂದಿದೆ ಎಂದು ವಿಧಾನಸೌಧದ ಮಹಾದ್ವಾರ ಮೆಟ್ಟಿಲು ಬಳಿ ಏರ್ಪಡಿಸಿದ್ದ ಕೆಎಸ್ಆರ್ಟಿಸಿ ನೂತನ ಬಸ್ ಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾರಿಗೆ ನಿಗಮಗಳಲ್ಲಿ 24,000 ಬಸ್ ಗಳು ಪ್ರತಿದಿನ 1.58 ಲಕ್ಷ ಟ್ರಿಪ್ ಸಂಚರಿಸುತ್ತಿವೆ. ವಾರ್ಷಿಕ ಶೇಕಡ 10 ರಷ್ಟು ಬಸ್ ಗುಜರಿಗೆ ಹೋಗುತ್ತವೆ. ಶೇ. 10 ರಷ್ಟು ಸಿಬ್ಬಂದಿ ಸೇವೆಯಿಂದ ವಯೋ ನಿವೃತ್ತರಾಗುತ್ತಾರೆ. ಕಳೆದ 7 ವರ್ಷಗಳಿಂದ ನಿಗಮಗಳಲ್ಲಿ ಸಿಬ್ಬಂದಿ ನೇಮಕವಾಗಿಲ್ಲ. ಈಗ 13000 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read