Rama Mandira : ಇನ್ಮುಂದೆ ಪ್ರತಿನಿತ್ಯ ಮಧ್ಯಾಹ್ನ 1 ಗಂಟೆ ರಾಮಲಲ್ಲಾಗೆ ವಿಶ್ರಾಂತಿ, ಭಕ್ತರಿಗೆ ದರ್ಶನವಿಲ್ಲ.!

ನವದೆಹಲಿ : ಅಯೋಧ್ಯೆ ರಾಮ ದೇವಾಲಯದ ರಾಮಲಲ್ಲಾ ಯೋಗಕ್ಷೇಮದ ಬಗ್ಗೆ ಮುಖ್ಯ ಅರ್ಚಕರ ಕಾಳಜಿಗೆ ಪ್ರತಿಕ್ರಿಯೆಯಾಗಿ ಶುಕ್ರವಾರದಿಂದ ಹೊಸ ವೇಳಾಪಟ್ಟಿಯನ್ನು ಜಾರಿಗೆ ತರಲಾಗಿದೆ.

ರಾಮ್ ಲಲ್ಲಾ ಪ್ರತಿದಿನ ಒಂದು ಗಂಟೆ ಮಧ್ಯಾಹ್ನದ ವಿಶ್ರಾಂತಿಯನ್ನು ಪಡೆಯಲಿದ್ದಾನೆ. ರಾಮಲಲ್ಲಾ ಐದು ವರ್ಷದ ಮಗು, ರಾಮ್ ಲಲ್ಲಾ ಅತಿಯಾದ ಒತ್ತಡಕ್ಕೆ ಒಳಗಾಗಬಾರದು, ಆತನಿಗೆ ವಿಶ್ರಾಂತಿ ಬೇಕು ಎಂದು ಹೇಳಿದ್ದಾರೆ. ಆದ್ದರಿಂದ ಆಡಳಿತ ಮಂಡಳಿ ಪ್ರತಿನಿತ್ಯ ಮಧ್ಯಾಹ್ನ 1 ಗಂಟೆ ರಾಮಲಲ್ಲಾಗೆ ವಿಶ್ರಾಂತಿ ನೀಡಲು ನಿರ್ಧರಿಸಿದೆ. ಆದ್ದರಿಂದ 1 ಗಂಟೆ ಭಕ್ತರಿಗೆ ದರ್ಶನವಿರುವುದಿಲ್ಲ.

ಜನವರಿ 22 ರಂದು ಪವಿತ್ರ ನಗರವಾದ ಅಯೋಧ್ಯೆಯಲ್ಲಿ ರಾಮಲಲ್ಲಾ ಭವ್ಯ ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ, ರಾಮ ಮಂದಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಈ ಹಿಂದೆ, ಜನವರಿ 23 ರಿಂದ ದೇವರನ್ನು ಎರಡು ಗಂಟೆಗಳ ಆಚರಣೆಗಾಗಿ ಬೆಳಿಗ್ಗೆ 4 ಗಂಟೆಗೆ ಎಬ್ಬಿಸಲಾಗುತ್ತಿತ್ತು, “ದರ್ಶನ” ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಗಿ ರಾತ್ರಿ 10 ಗಂಟೆಗೆ ಕೊನೆಗೊಳ್ಳುತ್ತಿತ್ತು.

ಅರ್ಚಕ ಆ ಸತ್ಯೇಂದ್ರ ದಾಸ್ ಪ್ರಕಾರ, “ಶ್ರೀ ರಾಮ್ ಲಲ್ಲಾ ಐದು ವರ್ಷದ ಮಗು ಮತ್ತು 18 ಗಂಟೆಗಳ ಕಾಲ ಇಂತಹ ದೀರ್ಘಕಾಲದ ಒತ್ತಡವನ್ನು ಸಹಿಸಲು ಸಾಧ್ಯವಿಲ್ಲ. ಆದ್ದರಿಂದ, ದೇವರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು, ರಾಮ್ ಲಲ್ಲಾಗೆ ವಿಶ್ರಾಂತಿ ಪಡೆಯಲು ಅನುವು ಮಾಡಿಕೊಡುವ ಮೂಲಕ ಮಧ್ಯಾಹ್ನ 12:30 ರಿಂದ 1:30 ರವರೆಗೆ ದೇವಾಲಯದ ಬಾಗಿಲುಗಳನ್ನು ಮುಚ್ಚಲು ನಿರ್ಧರಿಸಲಾಗಿದೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read