ರಾಮಮಂದಿರ ಉದ್ಘಾಟನೆಗೆ ಪ್ರಸಾದವಾಗಿ ಶುದ್ಧ ದೇಸಿ ತುಪ್ಪದಿಂದ ತಯಾರಿಸಿದ 45 ಟನ್ ಲಡ್ಡುಗಳ ವಿತರಣೆ

ಅಯೋಧ್ಯೆ: ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ವಾರಣಾಸಿ ಮತ್ತು ಗುಜರಾತ್‌ನಿಂದ ಮಿಠಾಯಿ ತಯಾರಕರ ತಂಡವೊಂದು ಅಯೋಧ್ಯೆಗೆ ಆಗಮಿಸಿದ್ದು, ಜನವರಿ 22ರ ಐತಿಹಾಸಿಕ ಸಂದರ್ಭದಲ್ಲಿ ಪಾಲ್ಗೊಳ್ಳಲಿರುವ ಗಣ್ಯರು ಮತ್ತು ಭಕ್ತರಿಗೆ ಸಿಹಿ ಪ್ರಸಾದ ಸಿದ್ಧಪಡಿಸುತ್ತಿದ್ದಾರೆ.

ಪ್ರಾಣ ಪ್ರತಿಷ್ಠಾ ಸಮಾರಂಭಕ್ಕಾಗಿ 45 ಟನ್ ಲಡ್ಡುಗಳನ್ನು ತಯಾರಿಸಲು ಅವರನ್ನು ನಿಯೋಜಿಸಲಾಗಿದೆ. ಅವರು ಶುದ್ಧ ದೇಸಿ ತುಪ್ಪದಿಂದ ದಿನಕ್ಕೆ ಸುಮಾರು 1200 ಕೆಜಿ ಲಡ್ಡುಗಳನ್ನು ತಯಾರಿಸುತ್ತಿದ್ದಾರೆ, ‘ಪ್ರಸಾದ’ವಾಗಿ ಅದನ್ನು ನೀಡಲಾಗುವುದು.

ವಿಶೇಷವಾಗಿ ಉತ್ತರ ಭಾರತದಲ್ಲಿ ಅತ್ಯಂತ ಜನಪ್ರಿಯ ಸಿಹಿಯಾದ ಲಡ್ಡುಗಳನ್ನು ತಯಾರಿಸುವ ಪ್ರಕ್ರಿಯೆಯು ಜನವರಿ 6 ರಂದು ಪ್ರಾರಂಭವಾಗಿದ್ದು, ಜನವರಿ 22 ರವರೆಗೆ ಮುಂದುವರಿಯುತ್ತದೆ.

ಶುದ್ಧ ದೇಸಿ ತುಪ್ಪವನ್ನು ಬಳಸಿ ಲಡ್ಡುಗಳನ್ನು ತಯಾರಿಸಲಾಗುತ್ತಿದ್ದು, ಈ ತಿಂಗಳ 22 ರಂದು ರಾಮ್ ಲಾಲಾಗೆ ಪ್ರಸಾದವಾಗಿ ನೀಡಲಾಗುವುದು. ಒಂದು ದಿನದಲ್ಲಿ ಸುಮಾರು 1200 ಕೆಜಿಯಷ್ಟು ಲಡ್ಡುಗಳನ್ನು ನಾವು ತಯಾರಿಸುತ್ತೇವೆ. ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ನಾವು 45 ಟನ್ ಲಡ್ಡುಗಳನ್ನು ತಯಾರಿಸಬೇಕಾಗಿದೆ ಎಂದು ಮಿಠಾಯಿಗಾರರೊಬ್ಬರು ಗುರುವಾರ ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read