BREAKING: ಬಂದೂಕು ರಿಪೇರಿ ಅಂಗಡಿಗಳ ಮೇಲೆ ಪೊಲೀಸ್ ದಾಳಿ: 6 ಜನ ಅರೆಸ್ಟ್

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಗುಂಡಿನ ದಾಳಿ ನಡೆಸಿ ಇಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಕ್ರಮ ಬಂದೂಕಿನಿಂದ ಶೂಟೌಟ್ ಹಿನ್ನೆಲೆಯಲ್ಲಿ ಖಾಕಿ ಪಡೆ ಅಲರ್ಟ್ ಆಗಿದೆ.

ಬಂದೂಕು ರಿಪೇರಿ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು, ಕಳಸ, ಬಾಳೂರು. ಎನ್.ಆರ್. ಪುರ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆಕ್ರಮ ಬಂದೂಕುಗಳು, ರಿವಾಲ್ವರ್ ಗುಂಡುಗಳು ಪತ್ತೆಯಾಗಿವೆ.

ಅಕ್ರಮವಾಗಿ ಬಂದೂಕುಗಳನ್ನು ಸಂಗ್ರಹ ಮಾಡಿದ್ದ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಸದಾಶಿವ ಆಚಾರ್, ಸುಧಾಕರ ಆಚಾರಿ, ರಾಮಚಂದ್ರ ಆಚಾರಿ, ಸುಂದರ್, ಗಂಗಾಧರ್, ಶಿವರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read