ರಾಯಚೂರು: ಸಿಡಿಲು ಬಡಿದು ಕುರಿ ಮೇಯಿಸುತ್ತಿದ್ದ ರೈತ ಮಹಿಳೆ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಉಡಮಗಲ್ ಖಾನಾಪುರದಲ್ಲಿ ನಡೆದಿದೆ.
ಮಲ್ಲಮ್ಮ ಟನಗಲ್ ಮೃತ ಮಹಿಳೆ. ಕುರಿ ಮೇಯಿಸಲೆಂದು ಹೋಗಿದ್ದ ವೇಳೆ ಗುಡುಗು, ಸಿಡಿಲು ಸಹಿತ ಮಳೆ ಅಬ್ಬರಿಸಲಾರಂಭಿಸಿದೆ. ಈ ವೇಳೆ ಸಿಡಿಲು ಬಡಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.