ತಿಂಡಿ ಕೊಡಲು ತಡ ಮಾಡಿದ್ದಕ್ಕೆ ಹೋಟೆಲ್ ಮಾಲೀಕನ ಮುಖಕ್ಕೆ ಎಣ್ಣೆ ಎರಚಿದ ಗ್ರಾಹಕ

ರಾಯಚೂರು: ರಾಯಚೂರು ಜಿಲ್ಲೆ ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೋಳ್ಳಿ ಗ್ರಾಮದಲ್ಲಿ ತಿಂಡಿ ಕೊಡಲು ತಡ ಮಾಡಿದ್ದಕ್ಕೆ ಗ್ರಾಹಕನೊಬ್ಬ ಹೋಟೆಲ್ ಮಾಲೀಕನ ಮುಖಕ್ಕೆ ಬಿಸಿ ಎಣ್ಣೆ ಎರಚಿದ್ದಾನೆ.

ಭೀಮಾನಾಯಕ್ ಎಂಬಾತ ಹೋಟೆಲ್ ನಲ್ಲಿ ತಿಂಡಿ ತಿನ್ನಲು ಬಂದಿದ್ದಾನೆ. ಮಂಡಕ್ಕಿ ಒಗ್ಗರಣೆ ಹಾಕಿ ಕೊಡುವಲ್ಲಿ ತಡವಾಗಿದ್ದು, ಹೋಟೆಲ್ ಮಾಲೀಕ ರಂಗಯ್ಯ ಶೆಟ್ಟಿ ಅವರ ಮುಖಕ್ಕೆ ಎಣ್ಣೆ ಎರಚಿದ್ದಾನೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜೋಳ್ಳಿ ಗ್ರಾಮದ ಭೀಮಾನಾಯ್ ಬೆಳಿಗ್ಗೆ ಹೋಟೆಲ್ ಗೆ ಬಂದು ಇಡ್ಲಿ ಕೇಳಿದ್ದಾನೆ. ಇಡ್ಲಿ ಖಾಲಿ ಆಗಿದೆ ಎಂದು ರಂಗಯ್ಯ ಶೆಟ್ಟಿ ವಾಪಸ್ ಕಳಿಸಿದ್ದಾರೆ. ಸ್ವಲ್ಪ ಸಮಯದ ಬಳಿಕ ಬಂದ ಭೀಮಾನಾಯಕ್ ಮಂಡಕ್ಕಿ ಒಗ್ಗರಣೆ, ಮಿರ್ಚಿ ಕೊಡುವಂತೆ ಕೇಳಿದ್ದಾನೆ. ಒಗ್ಗರಣೆ ತರಲು ತಡವಾಗಿದ್ದರಿಂದ ಆಕ್ರೋಶಗೊಂಡು ಉಪ್ಪಿಟ್ಟು ಮಾಡಲು ಇಟ್ಟಿದ್ದ ಬಿಸಿ ಎಣ್ಣೆಯನ್ನು ರಂಗಯ್ಯ ಶೆಟ್ಟಿ ಮೇಲೆ ಎರಚಿ ಪರಾರಿಯಾಗಿದ್ದಾನೆ. ರಂಗಯ್ಯ ಶೆಟ್ಟಿ ಅವರನ್ನು ಮಾನ್ವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read