‘ಮಾನನಷ್ಟ ಶಿಕ್ಷೆ’ಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದ ನಂತರ ರಾಹುಲ್ ಗಾಂಧಿ ‘ಮೊದಲ ಪ್ರತಿಕ್ರಿಯೆ’

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬಿಗ್ ರಿಲೀಫ್ ಆಗಿ, 2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಅವರು ಮಾಡಿದ ‘ಮೋದಿ’ ಉಪನಾಮದ ಟೀಕೆಗೆ ಸಂಬಂಧಿಸಿದ ಶಿಕ್ಷೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.

ದೊಡ್ಡ ಆದೇಶದ ನಂತರ ಅವರ ಮೊದಲ ಟ್ವೀಟ್, ಏನೇ ಆಗಲಿ, ನನ್ನ ಕರ್ತವ್ಯ ಹಾಗೆಯೇ ಉಳಿದಿದೆ. ಭಾರತದ ಕಲ್ಪನೆಯನ್ನು ರಕ್ಷಿಸಿ ಎಂಬುದಾಗಿದೆ.

ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಇಂದು ಅಥವಾ ನಾಳೆ ಅಥವಾ ಮರುದಿನ, ಸತ್ಯವು ಯಾವಾಗಲೂ ಮೇಲುಗೈ ಸಾಧಿಸುತ್ತದೆ. ನನ್ನ ಹಾದಿ ಸ್ಪಷ್ಟವಾಗಿದೆ. ನಮಗೆ ಸಹಾಯ ಮಾಡಿದವರು ಮತ್ತು ಸಾರ್ವಜನಿಕರ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.

ಈ ಆದೇಶವನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ದು, ದೆಹಲಿಯಲ್ಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಕೇಂದ್ರ ಕಚೇರಿಗೆ ರಾಹುಲ್ ಭೇಟಿ ನೀಡಿದಾಗ ಭಾರಿ ಸ್ವಾಗತ ದೊರೆಯಿತು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read