ನವದೆಹಲಿ: ಗುಜರಾತ್ ನ ಅಹಮದಾಬಾದ್ ನಲ್ಲಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನಗೊಂಡಿದ್ದು, ಕಟ್ಟಡಗಳಿಗೆ ಡಿಕಿಹೊಡೆದು ನೆಲಕ್ಕಪ್ಪಿಸಿದ ವಿಮಾನ ಹೊತ್ತಿ ಉರಿದಿದೆ. ವಿಮಾನ ದುರಂತದ ಬಗ್ಗೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಏರ್ ಇಂಡಿಯಾ ವಿಮಾನ ಪತನ ಹೃದಯವಿದ್ರಾವಕ ಘಟನೆ. ಪ್ರಯಾಣಿಕರು, ಪೈಲೆಟ್ ಗಳ ಕುಟುಂಬಗಳ ನೋವು ಊಹಿಸಲೂ ಸಾಧ್ಯವಿಲ್ಲ. ಪ್ರತಿಯೊಂದು ಜೀವವೂ ಮುಖ್ಯ, ಪ್ರತಿ ಸೆಕೆಂಡ್ ಗಳೂ ಮುಖ್ಯ. ಕಾಂಗ್ರೆಸ್ ಕಾರ್ಯಕರ್ತರು ಸಹಾಯಕ್ಕೆ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ.