ರಾಧಿಕಾ ಕರಿಯ ಅಂದ್ರೆ ಓಕೆ, ಜಮೀರ್ ಕರೆದ್ರೆ ಯಾಕೆ…? ಮತ್ತೆ ವಿವಾದದ ಕಿಡಿ ಹೊತ್ತಿಸಿದ ತೇಜಸ್ವಿನಿ ಗೌಡ

ಮೈಸೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸಚಿವ ಜಮೀರ್ ಅಹಮ್ಮದ್ ಕರಿಯ ಎಂದು ಹೇಳಿದ ವಿಚಾರ ಮತ್ತೆ ವಿವಾದದ ಕಿಡಿ ಹೊತ್ತಿಸಿದೆ.

ಮಾಜಿ ಸಂಸದೆ ತೇಜಸ್ವಿನಿ ಗೌಡ ಅವರು ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ರಾಧಿಕಾ ಕರಿಯ ಅಂತ ಕರೆದರೆ ಓಕೆ, ಆದರೆ ಜಮೀರ್ ಕರೆದ್ರೆ ಆಕ್ಷೇಪವೇಕೆ ಎಂದು ಜಮೀರ್ ಹೇಳಿಕೆ ಸಮರ್ಥಿಸಿಕೊಳ್ಳುವ ಭರದಲ್ಲಿ ತೇಜಸ್ವಿನಿ ಎಡವಟ್ಟು ಮಾಡಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ರಾಧಿಕಾ ಅವರಿಗೆ ಕುಮಾರಸ್ವಾಮಿಯವರು ನಿಮಗೆ ಏನೆಂದು ಕರೆಯುತ್ತಾರೆ ಎಂದಾಗ ಚಿನ್ನು ಎನ್ನುತ್ತಾರೆ ಎಂದು ತಿಳಿಸುತ್ತಾರೆ. ನೀವು ಏನೆಂದು ಕರೆಯುತ್ತೀರಿ ಎಂದಾಗ ಕರಿಯ ಎನ್ನುತ್ತೇನೆ ಎಂದು ಹೇಳುತ್ತಾರೆ. ರಾಧಿಕಾ ಕುಮಾರಸ್ವಾಮಿ ಹೇಳಿದರೆ ಓಕೆ ಜಮೀರ್ ಹೇಳಿದ್ರೆ ಯಾಕೆ ಎಂದು ಕೇಳಿದ ತೇಜಸ್ವಿನಿ ಗೌಡ, ಈಗಂತೂ ಕರಿಯ, ಬಿಳಿಯ ಎಂದೆಲ್ಲಾ ಚರ್ಚೆ ನಡೆಯುತ್ತಿದೆ ಎಂದು ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಉಕ್ಕಿನ ಮಹಿಳೆಗೆ ಕಾಂಗ್ರೆಸ್ ಮಹಾನಮನ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read