ಪ್ರೀ ವೆಡ್ಡಿಂಗ್ ಶೂಟ್ ಬಳಿಕ ಕೊಲೆ ಸಂಚು: ಪುಣೆಯಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ….!

ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮಯೂರಿ ದಾಂಗ್ಡೆ ಎಂಬ ವಧು ತನ್ನ ಭಾವಿ ಪತಿ ಸಾಗರ್ ಜೈಸಿಂಗ್ ಕದಮ್ ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು. ನಿಶ್ಚಿತಾರ್ಥ ಹಾಗು ಪ್ರೀ ವೆಡ್ಡಿಂಗ್ ಶೂಟ್ ಮುಗಿದ ಬಳಿಕ ಈ ವಿಚಿತ್ರ ಘಟನೆ ನಡೆದಿದೆ.

ತನ್ನ ಭಾವಿಯಿಂದ ಅಸಮಾಧಾನಗೊಂಡ ಮಯೂರಿ, ತನ್ನ ಸಹವರ್ತಿ ಸಂದೀಪ್ ಗವಾಡೆಯೊಂದಿಗೆ ಸೇರಿ ಸಾಗರ್ ನನ್ನು ಕೊಲ್ಲಲು 1.5 ಲಕ್ಷ ರೂಪಾಯಿಗಳಿಗೆ ಸುಪಾರಿ ಹಂತಕರನ್ನು ನೇಮಿಸಿದ್ದಳು. ಫೆಬ್ರವರಿ 27 ರಂದು ದೌಂಡ್ ತಾಲೂಕಿನ ಖಾಮ್‌ಗಾಂವ್ ಫಾಟಾ ಬಳಿ ಸಾಗರ್ ಮೇಲೆ ದಾಳಿ ನಡೆಸಲಾಗಿತ್ತು. ಆದರೆ ಆತ ತೀವ್ರ ಗಾಯಗಳೊಂದಿಗೆ ಪಾರಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ತನಿಖೆ ನಡೆಸಿದ ಪೊಲೀಸರು ಮಯೂರಿಯ ಸಂಬಂಧಿಕರು ಮತ್ತು ಸಹವರ್ತಿಗಳು ಸೇರಿದಂತೆ ಐದು ಜನರನ್ನು ಬಂಧಿಸಿದ್ದಾರೆ. ಅಪರಾಧಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆದಾಗ್ಯೂ, ಮಯೂರಿ ತಲೆಮರೆಸಿಕೊಂಡಿದ್ದು, ಪೊಲೀಸರು ಆಕೆಯನ್ನು ಹುಡುಕುತ್ತಿದ್ದಾರೆ.

ವಧು ಮದುವೆಯನ್ನು ರದ್ದುಗೊಳಿಸಲು ಈ ರೀತಿಯಾಗಿ ಕೊಲೆಗೆ ಸಂಚು ರೂಪಿಸಿದ್ದರು ಎನ್ನಲಾಗುತ್ತಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read