ದೇವರಿಗೆ ʼನೈವೇದ್ಯʼ ಅರ್ಪಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

ಸಾಮಾನ್ಯವಾಗಿ ಪ್ರತಿ ಮನೆಗಳಲ್ಲೂ ದೇವರ ಪೂಜೆ ಮಾಡುತ್ತಾರೆ. ಪೂಜೆಯ ಸಮಯದಲ್ಲಿ ದೇವರಿಗೆ ನೈವೇದ್ಯ ಅರ್ಪಿಸುವುದು ಕಡ್ಡಾಯ. ವಿಶೇಷವಾಗಿ ಉಪವಾಸ ಮತ್ತು ಹಬ್ಬ ಹರಿದಿನಗಳಲ್ಲಿ ಇದು ಬಹಳ ಮುಖ್ಯವಾಗುತ್ತದೆ.

ಸಾಮಾನ್ಯವಾಗಿ ಜನರು ದೇವರಿಗೆ ನೈವೇದ್ಯ ಅರ್ಪಿಸುವಾಗ ಅನೇಕ ತಪ್ಪುಗಳನ್ನು ತಿಳಿಯದೇ ಮಾಡುತ್ತಾರೆ. ಇದರಿಂದ ಉಪವಾಸ ಮತ್ತು ಪೂಜೆಯ ಸಂಪೂರ್ಣ ಫಲವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಪೂಜೆಯ ಸಮಯದಲ್ಲಿ ದೇವರಿಗೆ ನೈವೇದ್ಯ ಅರ್ಪಿಸುವ ನಿಯಮಗಳೇನು ಅನ್ನೋದನ್ನು ನೋಡೋಣ.

ನೈವೇದ್ಯ ಇಡುವ ಸ್ಥಳ

ದೇವರಿಗೆ ಅನ್ನವನ್ನು ಅರ್ಪಿಸಿದ ನಂತರ ಪ್ರಸಾದವನ್ನು ನೆಲದ ಮೇಲೆ ಇಡಬಾರದು. ನೈವೇದ್ಯಗಳನ್ನು ದೇವರ ವಿಗ್ರಹಗಳಿಗೆ ಸಮೀಪದಲ್ಲಿ ಇಡುವುದು ಒಳ್ಳೆಯದಲ್ಲ. ಇದರೊಂದಿಗೆ ಪ್ರಸಾದವನ್ನು ಅರ್ಪಿಸುವಾಗ ದೇವರ ಬಳಿ ನೀರು ಇಡಬೇಕು. ಪ್ರಸಾದವನ್ನು ಯಾವಾಗಲೂ ಹಿತ್ತಾಳೆ, ಬೆಳ್ಳಿ, ಚಿನ್ನ ಅಥವಾ ಮಣ್ಣಿನಿಂದ ಮಾಡಿದ ಪಾತ್ರೆಯಲ್ಲಿ ಇಡುವುದು ಉತ್ತಮ. ಬಾಳೆ ಎಲೆಯಲ್ಲಿ ಭೋಗವನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ವಿತರಣೆ

ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ದೇವರಿಗೆ ಅರ್ಪಿಸುವುದು ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ನೀವು ದೇವರಿಗೆ ಆಹಾರವನ್ನು ಅರ್ಪಿಸುವಾಗ, ಪ್ರಸಾದವನ್ನು ಪೂಜಾ ಸ್ಥಳದಲ್ಲಿ ಇಡಬೇಡಿ. ತಕ್ಷಣವೇ ಪ್ರಸಾದವನ್ನು ತೆಗೆದುಕೊಂಡು ಅದನ್ನು ನೀವೇ ಸೇವಿಸಿ ಮತ್ತು ಇತರರಿಗೆ ವಿತರಿಸಿ, ಇಲ್ಲದಿದ್ದರೆ ಮನೆಯಲ್ಲಿ ನಕಾರಾತ್ಮಕತೆಯನ್ನು ಆಹ್ವಾನಿಸಿದಂತಾಗುತ್ತದೆ.

ಉಪವಾಸದಲ್ಲಿ ನೈವೇದ್ಯ

ನೀವು ಉಪವಾಸ ಮಾಡುತ್ತಿದ್ದರೆ ಮತ್ತು ಪ್ರಸಾದವು ಆಹಾರದ ರೂಪದಲ್ಲಿದ್ದರೆ ಅದನ್ನು ನೀವೇ ತೆಗೆದುಕೊಳ್ಳಬೇಡಿ, ಅದನ್ನು ಇತರರಿಗೆ ಹಂಚಿರಿ. ಅಂದಹಾಗೆ ಎಲ್ಲಾ ದೇವರು ಮತ್ತು ದೇವತೆಗಳಿಗೆ ವಿವಿಧ ರೀತಿಯ ನೈವೇದ್ಯಗಳು ಪ್ರಿಯವಾಗಿವೆ. ಅದನ್ನು ತಯಾರಿಸುವುದು ಸಾಧ್ಯವಿಲ್ಲ ಎಂದಾದಲ್ಲಿ ಸಿಹಿತಿಂಡಿಗಳು ಮತ್ತು ಸಕ್ಕರೆ, ಮಿಠಾಯಿಗಳನ್ನು ಸಹ ನೀಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read