ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿ ಸಮಾಜದ ಸ್ವಾಸ್ಥ್ಯ ಕೆಡಿಸಲು ಯತ್ನಿಸಿದ ಆರು ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಹೆಜಮಾಡಿಯ ಗ್ರೀನ್ ಹೌಸ್ ನ ಮೊಹಮ್ಮದ್ ಅಸ್ಲಾಂ(23), ಕಾಟಿಪಾಳ್ಳ ಆಶ್ರಯ ಕಲೋನಿ ನಿವಾಸಿ ಚೇತನ್(20), ಚೇಳ್ಯಾರ್ ನ ನಿತಿನ್ ಅಡಪ(23), ಫರಂಗಿ ಪೇಟೆ ಅರ್ಕುಳ ಕೊಪ್ಪಲ್ ಹೌಸ್ ನ ರಿಯಾಜ್ ಇಬ್ರಾಹಿಂ(30), ಕೂಳೂರು ಕಿಲೇರಿಯಾ ಮಸೀದಿ ಸಮೀಪದ ನಿವಾಸಿ ಜಮಾಲ್ ಜಾಕೀರ್(21) ಹಳೆಯಅಂಗಡಿ ಕೊಳವೈಲ್ ನ ಗುರುಪ್ರಸಾದ್ ಬಂಧಿತ ಆರೋಪಿಗಳು.
ಇವರಲ್ಲಿ ಮಹಮ್ಮದ್ ಅಸ್ಲಾಂ, ರಿಯಾಜ್ ಇಬ್ರಾಹಿಂ ಸೌದಿ ಅರೇಬಿಯಾದಲ್ಲಿದ್ದು, ಲುಕ್ ಔಟ್ ಸುತ್ತೋಲೆ ಹೊರಡಿಸಿ ಅಲ್ಲಿನ ಪೊಲೀಸರ ಮೂಲಕ ಕರೆಸಿಕೊಂಡು ಬಂಧಿಸಲಾಗಿದೆ. ಇವರೆಲ್ಲರ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಬಂಟ್ವಾಳ ಹತ್ಯೆ ಪ್ರಕರಣದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕುವವರ ಪತ್ತೆಗಾಗಿ ಪೊಲೀಸ್ ಇಲಾಖೆಯಿಂದ ವಿಶೇಷ ತಂಡ ರಚಿಸಲಾಗಿದೆ.