ಶಿವಮೊಗ್ಗ : ಕಾಂತಾರ -1 ದೋಣಿ ಅವಘಡದ ಬಗ್ಗೆ ಮಾಹಿತಿ ನೀಡುವಂತೆ ಚಿತ್ರತಂಡಕ್ಕೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ನೋಟಿಸ್ ನೀಡಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಯಡೂರು ಸಮೀಪದ ಮಾಣಿ ಜಲಾಶಯದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ದೋಣಿ ಮಗುಚಿತ್ತು. ಚಿತ್ರತಂಡ ಶೂಟಿಂಗ್ ಗೆ ಅನುಮತಿ ಪಡೆದ ದಾಖಲೆ ಸಲ್ಲಿಸಲು ನೋಟಿಸ್ ನೀಡಲಾಗಿದೆ.
ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಸಿನಿಮಾ ಶೂಟಿಂಗ್ ಮಾಡುತ್ತಿದ್ದ ವೇಳೆ ದೋಣಿಯೊಂದು ಜಲಾಶಯದ ನೀರಿನಲ್ಲಿ ಮಗುಚಿದೆ ಎಂದು ಹೇಳಲಾಗಿತ್ತು. ಕ್ಯಾಮರಾಮೆನ್, ನಟ ರಿಷಬ್ ಶೆಟ್ತಿ ಸೇರಿದಂತೆ 30 ಜನರು ಅಪಾಯದಿಂದ ಪಾರಾಗಿದ್ದರು. ಡ್ಯಾಂ ನೀರಿನಲ್ಲಿ ದೋಣಿ ಮಗುಚುತ್ತಿದ್ದಂತೆ ಕಲಾವಿದರು, ತಂತ್ರಜ್ಞರು ನೀರಿನಲ್ಲಿ ಈಜಿಕೊಂಡು ದಡ ಸೇರಿ ಬಚಾವ್ ಆಗಿದ್ದರು. ಕಾಂತಾರ ಚಾಪ್ಟರ್ 1ರ ಕೊನೇ ಹಂತದ ಶೂಟಿಂಗ್ ಮಾಸ್ತಿಕಟ್ಟೆ ಭಾಗದಲ್ಲಿ ನಡೆಯುತ್ತಿದೆ. 15 ದಿನಗಳ ಕಾಲ ಈ ಭಾಗದಲ್ಲಿ ಚಿತ್ರೀಕರಣಕ್ಕೆ ನಿರ್ಧರಿಸಲಾಗಿತ್ತು.