‘ಪ್ರತಾಪ್ ಸಿಂಹ’ ಬಹಳ ಬುದ್ದಿವಂತ, ಅವರು ಯಾಕೆ ಇಂತವರಿಗೆ ಪಾಸ್ ಕೊಟ್ಟರು..? : ಡಿಸಿಎಂ ಡಿಕೆಶಿ

ಬೆಂಗಳೂರು : ಪ್ರತಾಪ್ ಸಿಂಹ ಬಹಳ ಬುದ್ದಿವಂತ, ಅವರು ಯಾಕೆ ಇಂತವರಿಗೆ ಪಾಸ್ ಕೊಟ್ಟರು..? ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಸಂಸತ್ ನಲ್ಲಿ ಕಲರ್ ಬಾಂಬ್ ಸಿಡಿಸಿದ ಯುವಕರಿಗೆ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ವಿತರಣೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.

ಇದನ್ನು ನಾನು ಟಿವಿಯಲ್ಲಿ ನೋಡಿದೆ, ಮೇಲಿಂದಲೇ ಒಬ್ಬರು ಹಾರಿದ್ದಾರೆ. ನಮ್ಮ ಪ್ರತಿಪಕ್ಷದವರೇ ಇದರ ಹೊಣೆ ಹೊರಬೇಕು ಎಂದರು. ಪ್ರತಾಪ್ ಸಿಂಹ ಬಹಳ ಬುದ್ದಿವಂತ, ಅವರು ಯಾಕೆ ಇಂತವರಿಗೆ ಪಾಸ್ ಕೊಟ್ಟರು..? ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿರುವಾಗ ಲೋಕಸಭೆಯ ಕೊಠಡಿಗೆ ಹಾರಿದ ಮೈಸೂರು ಮೂಲದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read