ನವದೆಹಲಿ: ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಭಾರತ ಕ್ರಿಕೆಟ್ ತಂಡ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ 7 ರನ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದ ಚಾಂಪಿಯನ್ ಆಗಿದೆ.
ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನ, ಟೀಂ ಇಂಡಿಯಾ ಗೆಲುವಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಈ ಗೆಲುವಿನೊಂದಿಗೆ ರಾಹುಲ್ ದ್ರಾವಿಡ್ ಕೋಚ್ ಸೇವಾ ಅವಧಿ ಮುಕ್ತಾಯವಾಗಿದೆ. ಪ್ರಧಾನಿ ಮೋದಿ ಅವರು ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ರಾಹುಲ್ ದ್ರಾವಿಡ್ ಅವರ ಅದ್ಭುತ ಕೋಚಿಂಗ್ ಪ್ರಯಾಣವು ಭಾರತೀಯ ಕ್ರಿಕೆಟ್ನ ಯಶಸ್ಸನ್ನು ರೂಪಿಸಿದೆ. ಅವರ ಅಚಲ ಸಮರ್ಪಣೆ, ಕಾರ್ಯತಂತ್ರದ ಒಳನೋಟಗಳು ಮತ್ತು ಸರಿಯಾದ ಪ್ರತಿಭೆಯನ್ನು ಪೋಷಿಸುವುದು ತಂಡವನ್ನು ಪರಿವರ್ತಿಸಿದೆ. ಅವರ ಕೊಡುಗೆಗಳಿಗಾಗಿ ಮತ್ತು ಪೀಳಿಗೆಗೆ ಸ್ಫೂರ್ತಿ ನೀಡುವುದಕ್ಕಾಗಿ ಭಾರತ ಅವರಿಗೆ ಕೃತಜ್ಞವಾಗಿದೆ. ಅವರು ವಿಶ್ವಕಪ್ ಎತ್ತಿ ಹಿಡಿದಿರುವುದು ನಮಗೆ ಖುಷಿ ತಂದಿದೆ. ಅವರನ್ನು ಅಭಿನಂದಿಸಿದ್ದಕ್ಕೆ ಸಂತೋಷವಾಗಿದೆ ಎಂದು ಮೋದಿ ತಿಳಿಸಿದ್ದಾರೆ.
Rahul Dravid’s incredible coaching journey has shaped the success of Indian cricket.
His unwavering dedication, strategic insights and nurturing the right talent have transformed the team.
India is grateful to him for his contributions and for inspiring generations. We are… pic.twitter.com/8MKSPqztDV
— Narendra Modi (@narendramodi) June 30, 2024