ಮುಡಾದಿಂದ ಸಿಎಂ ಪತ್ನಿಗೆ ನಿವೇಶನ ಪ್ರಕರಣ: ಮೋಸದಿಂದ ಜಮೀನು ಮಾರಾಟ ಆರೋಪ: ನ್ಯಾಯಕ್ಕಾಗಿ ಮೂಲ ಮಾಲೀಕರಿಂದ ದೂರು

ಮೈಸೂರು: ಮುಡಾದಿಂದ ಸಿಎಂ ಪತ್ನಿ ಜಮೀನು ಬದಲಿಗೆ ನಿವೇಶನ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಜಮೀನನ್ನು ಮೋಸದಿಂದ ಮಾರಾಟ ಮಾಡಲಾಗಿದೆ ಎಂದು ದೂರು ನೀಡಲಾಗಿದೆ.

ಮುಡಾದಿಂದ ಸಿಎಂ ಪತ್ನಿ ಜಮೀನಿಗೆ ಬದಲಿ ನಿವೇಶನ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಪ್ಪನ ವಿರುದ್ಧವೇ ದೇವರಾಜ್ ಅವರ ಅಣ್ಣನ ಮಕ್ಕಳು ದೂರು ನೀಡಿದ್ದಾರೆ. ಮೈಸೂರು ಎಡಿಸಿ ಶಿವರಾಜ್ ಅವರಿಗೆ ಮಲ್ಲಯ್ಯನ ಮಗ ಜವರಯ್ಯನಿಂದ ದೂರು ಸಲ್ಲಿಕೆಯಾಗಿದೆ.

ಮುಖ್ಯಮಂತ್ರಿ ಪತ್ನಿಯ ಸಹೋದರ ಮಲ್ಲಿಕಾರ್ಜುನ ಸ್ವಾಮಿಗೆ ಮೋಸದಿಂದ ನಮ್ಮ ಜಮೀನನ್ನು ದೇವರಾಜ್ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮೈಲಾರಯ್ಯ ಪುತ್ರ ಮಂಜುನಾಥರಿಂದಲೂ ಮೈಸೂರು ಎಡಿಸಿಗೆ ದೂರು ಸಲ್ಲಿಕೆಯಾಗಿದೆ.

ಚಿಕ್ಕಪ್ಪ ಅನ್ಯಾಯ ಮಾಡಿ ನಮ್ಮ ಜಮೀನನ್ನು ಮಾರಾಟ ಮಾಡಿದ್ದಾರೆ. ಸಿಎಂ ಪತ್ನಿ ಹೆಸರಲ್ಲಿರುವ ಜಮೀನು ನಮ್ಮದೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜಮೀನಿನ ಮೂಲ ಮಾಲೀಕರಿಂದ ಅಪಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ನ್ಯಾಯ ಕೊಡಿಸಿ ಎಂದು ಜವರಯ್ಯ ಮತ್ತು ಮಂಜುನಾಥ್ ಮನವಿ ಮಾಡಿದ್ದಾರೆ. ಬಿಜೆಪಿಯ ಎನ್. ಮಹೇಶ್ ಮತ್ತು ಶಾಸಕ ಶ್ರೀವತ್ಸ ಜೊತೆಗೋಡಿ ಮನವಿ ಸಲ್ಲಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read