ಫೋಟೋ ಶೂಟ್ ವೇಳೆ ಗಲಾಟೆ: ದುಷ್ಕರ್ಮಿಗಳಿಂದ ಯುವಕನ ಹತ್ಯೆ

ಬೆಂಗಳೂರು: ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ ಸಮೀಪದ ಡಾಬಾವೊಂದರಲ್ಲಿ ಫೋಟೋ ಶೂಟ್ ಮಾಡುವಾಗ ದುಷ್ಕರ್ಮಿಗಳು ಕಿರಿಕ್ ತೆಗೆದು ಯುವಕನನ್ನು ಹತ್ಯೆ ಮಾಡಿದ ಘಟನೆ ಭಾನುವಾರ ಸಂಜೆ ನಡೆದಿದೆ.

ಮೃತನನ್ನು ದೊಡ್ಡಬಳ್ಳಾಪುರದ ಕಚೇರಿ ಪಾಳ್ಯ ನಿವಾಸಿ ಸೂರ್ಯ(19) ಎಂದು ಗುರುತಿಸಲಾಗಿದೆ. ಡಾಬಾ ಎದುರು ಅಲಂಕರಿಸಿದ್ದ ಸೀನರಿ ಬಳಿ ಸೂರ್ಯ ಹಾಗೂ ಆತನೊಂದಿಗೆ ಇದ್ದ ಮೂವರು ಯುವಕರು ಫೋಟೋ ಶೂಟ್ ಮಾಡಿಕೊಳ್ಳುತ್ತಿದ್ದರು.

ಅಲ್ಲಿಗೆ ಬಂದ ಕುಂಟನಹಳ್ಳಿ ಗ್ರಾಮದ ಯುವಕರ ತಂಡ ತಮ್ಮ ಫೋಟೋ ತೆಗೆಯುವಂತೆ ಕಿರಿಕ್ ತೆಗೆದಿದ್ದಾರೆ. ಈ ವೇಳೆ ಗಲಾಟೆ ನಡೆದು ಸೂರ್ಯನ ಎದೆಗೆ ಹರಿತವಾದ ಕೀ ಚೈನ್ ನಿಂದ ಚುಚ್ಚಲಾಗಿದೆ. ತೀವ್ರ ರಕ್ತಸ್ರಾವ ಆಗಿದ್ದು, ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯ ಸೂರ್ಯ ಮೃತಪಟ್ಟಿದ್ದಾನೆ. ದೊಡ್ಡಬೆಳವಂಗಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read