ಮಂಗಳೂರು: ನಿಷೇಧಿತ ಪಿಎಫ್ಐ ಸಂಘಟನೆ ಪರ ಪ್ರಚಾರ ಮಾಡಿದ್ದ ಹಿನ್ನೆಲೆಯಲ್ಲಿ ಕಡಬ ಮೂಲದ ಮುಸ್ಲಿಂ ಧರ್ಮಗುರುವನ್ನು ಪೊಲೀಸರು ಬಂಧಿಸಿದ್ದಾರೆ.
ಸೈಯ್ಯದ್ ಇಬ್ರಾಹಿಂ ತಂಬಲ್ ಬಂಧಿತ ಧರ್ಮಗುರು. ಪಿಎಫ್ ಐ ಸಂಘಟನೆ ಭೂಗತ ಸದಸ್ಯರನ್ನು ಸಂಪರ್ಕಿಸಿದ್ದ ಧರ್ಮಗುರು ಸೈಯ್ಯದ್ ಇಬ್ರಾಹಿಂ ತಂಬಳ್, ಸಾಮಾಜಿಕ ಜಾಲತಾಣಗಳಲ್ಲಿ ಸಂಘಟನೆಯ ಕುರಿತು ಪ್ರಚಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಧರ್ಮಗುರುವನ್ನು ಬಂಧಿಸಲಾಗಿದೆ.
ಪಿಎಸ್ ಐ ಪುನರಚನೆಯ ಬಗ್ಗೆ ಧರ್ಮಗುರು ಸೈಯ್ಯದ್ ಪ್ರಚಾರ ಮಾಡಿದ್ದಲ್ಲದೇ ಸಲಮಾನ್ ಸಲಮಾ ಎಂಬ ಹೆಸರಲ್ಲಿ ವಾಟ್ಸಪ್ ಗ್ರೂಪ್ ರಚಿಸಿದ್ದ. ಈ ಮೂಲಕ ಭೂಗತರಾಗಿದ್ದ ಸಂಘಟನೆಯ ಸದಸ್ಯರನ್ನು ಸಂಪರ್ಕಿಸಿದ್ದ. ಮಂಗಳೂರು ಉದ್ರು ಸ್ಟೋರ್ ಬಳಿಯಿಂದ ಧರ್ಮಗುರುವನ್ನು ಬಂಧಿಸಲಾಗಿದೆ.