ಕರ್ತವ್ಯದ ವೇಳೆ ಮದ್ಯ ಸೇವಿಸಿದ ಪಿಡಿಒ ಅಮಾನತು

ಚಿತ್ರದುರ್ಗ: ಅನಧಿಕೃತ ಗೈರು ಹಾಜರಿ ಹಾಗೂ ಕರ್ತವ್ಯದ ವೇಳೆ ಮದ್ಯಪಾನ ಸೇವಿಸಿದ ಹಿನ್ನಲೆಯಲ್ಲಿ ಚಳ್ಳಕೆರೆ ತಾಲ್ಲೂಕು ಗೌಡಗೆರೆ ಗ್ರಾ.ಪಂ. ಪಿಡಿಒ ವೆಂಕಟೇಶ್ ಅವರನ್ನು ಅಮಾನತುಗೊಳಿಸಿ ಜಿ.ಪಂ. ಸಿಇಒ ಎಸ್.ಜೆ. ಸೋಮಶೇಖರ್ ಆದೇಶಿಸಿದ್ದಾರೆ.

ಪಿಡಿಒ ವೆಂಕಟೇಶ್ ಅವರ ಮೇಲೆ ಕೇಳಿ ಬಂದ ದೂರುಗಳನ್ನು ಚಳ್ಳಕೆರೆ ತಾ.ಪಂ. ಇಒ ಅವರು ಪರಿಶೀಲಿಸಿ, ಶಿಸ್ತು ಕ್ರಮ ಕೈಗೊಳ್ಳುವಂತೆ ಅವರಿಗೆ ವರದಿ ನೀಡಿದ್ದರು. ಈ ಹಿನ್ನಲೆಯಲ್ಲಿ ಕೆ.ಸಿ.ಎಸ್(ಸಿ.ಸಿ.ಎ) ನಿಯಾಮಾವಳಿ-1957ರ ನಿಯಮ 10(1)ರ ಅನ್ವಯ ಪಿಡಿಒ ವೆಂಕಟೇಶ ಅವರನ್ನು ಅಮಾನುತು ಮಾಡಿದ್ದಾರೆ.

ಗೌಡಗೆರೆ ಗ್ರಾ.ಪಂ.ಗೆ ನನ್ನಿವಾಳ ಗ್ರಾ.ಪಂ.ಕಾರ್ಯದರ್ಶಿ ಆರ್.ಪಿ.ವೇದಮೂರ್ತಿಯವರನ್ನು ಹೆಚ್ಚುವರಿ ಪಿಡಿಒ ಆಗಿ ನೇಮಕ ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read