ವಂದೇ ಭಾರತ್ ರೈಲಿನಲ್ಲಿ ಹಳಸಿದ, ವಾಸನೆ ಬರುತ್ತಿದ್ದ ಆಹಾರ ವಾಪಸ್ ನೀಡಿದ ಪ್ರಯಾಣಿಕ: ಹಣ ಹಿಂದಿರುಗಿಸಲು ಒತ್ತಾಯ

ನವದೆಹಲಿ-ವಾರಣಾಸಿ ವಂದೇ ಭಾರತ್ ಎಕ್ಸ್‌ ಪ್ರೆಸ್ ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಪ್ರಯಾಣದ ಸಮಯದಲ್ಲಿ ನೀಡಲಾದ ಆಹಾರ ಹಳಸಿದ್ದು, ವಾಸನೆಯಿಂದ ಕೂಡಿದೆ ಎಂದು ಹೇಳಿ ಹಿಂತಿರುಗಿಸಿದ್ದಾರೆ.

ಪ್ರಯಾಣಿಕರು ತಮ್ಮ ಆಹಾರದ ಟ್ರೇಗಳನ್ನು ಬಿಟ್ಟು ಅದು ಕಳಪೆ ಗುಣಮಟ್ಟದ್ದಾಗಿದೆ ಎಂದು ಹೇಳಿಕೊಂಡು ಅದನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಸಿಬ್ಬಂದಿಗೆ ಕೇಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ದುರ್ವಾಸನೆ ಬೀರುತ್ತಿರುವ ಆಹಾರದ ಬಗ್ಗೆ ದೂರು ನೀಡಿದ ಪ್ರಯಾಣಿಕರು ಹಣ ಮರುಪಾವತಿಗೆ ಕೇಳಿದ್ದಾರೆ. ಆಹಾರ ಒದಗಿಸುವ ಜವಾಬ್ದಾರಿಯುತ ಮಾರಾಟಗಾರರು ವಂದೇ ಭಾರತ್ ಬ್ರಾಂಡ್ ಹೆಸರನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಪ್ರಯಾಣಿಕರ ದೂರಿನ ನಂತರ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮಾರಾಟಗಾರನಿಗೆ ಸೂಕ್ತ ದಂಡವನ್ನು ವಿಧಿಸಲಾಗಿದೆ ಎಂದು ರೈಲ್ವೆ ಹೇಳಿದೆ.

https://twitter.com/akash24188/status/1743654735046193341

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read