ದಲಿತ ಮಹಿಳೆ ತಯಾರಿಸಿದ ಬಿಸಿಯೂಟ ಊಟ ತಿನ್ನದಂತೆ ಮಕ್ಕಳ ತಡೆದ ಪೋಷಕರು; ಶಾಲೆಗೇ ಭೇಟಿ ನೀಡಿ ಮಕ್ಕಳೊಂದಿಗೆ ಊಟ ಮಾಡಿದ ಸಂಸದೆ ಕನಿಮೋಳಿ

ಚೆನ್ನೈ: ದಲಿತ ಮಹಿಳೆಯೊಬ್ಬರು ತಯಾರಿಸಿದ ಆಹಾರವನ್ನು ತಿನ್ನಲು ತಮಿಳುನಾಡಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ.

ಸ್ವಸಹಾಯ ಸಂಘದ ಸದಸ್ಯೆ ದಲಿತ ಮಹಿಳೆ ಮುನಿಯಸೆಲ್ವಿ ಅವರನ್ನು ಉಸಿಲಂಪಟ್ಟಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಡುಗೆಯವರಾಗಿ ನೇಮಿಸಲಾಗಿದೆ.

ಶಾಲೆಯಲ್ಲಿ ಹೆಚ್ಚುವರಿ ಆಹಾರದ ಬಗ್ಗೆ ಅಧಿಕಾರಿಗಳು ಮುನಿಯಸೆಲ್ವಿ ಅವರನ್ನು ಪ್ರಶ್ನಿಸಿದಾಗ, 11 ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ತಾನು ತಯಾರಿಸಿದ ಉಪಹಾರವನ್ನು ತಿನ್ನಲು ನಿರಾಕರಿಸಿದ್ದಾರೆ. ಅವರ ಪೋಷಕರು ತಮ್ಮ ಜಾತಿಯ ಕಾರಣದಿಂದ ಊಟ ಮಾಡದಂತೆ ಮಕ್ಕಳಿಗೆ ಹೇಳಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಅಧಿಕಾರಿಗಳು ಪೊಲೀಸರೊಂದಿಗೆ ಪೋಷಕರನ್ನು ವಿಚಾರಿಸಿದ್ದು, ಜಿಲ್ಲಾ ಮಾಹಿತಿ ಸಂಗ್ರಹಣಾ ಅಧಿಕಾರಿಗೆ ವಿಷಯ ತಿಳಿದಿದೆ. ಡಿಎಂಕೆ ಸಚಿವರು ಮಧ್ಯಪ್ರವೇಶಿಸಿದ್ದಾರೆ. ಡಿಎಂಕೆ ಸಂಸದೆ ಕನಿಮೋಳಿ, ರಾಜ್ಯ ಸಚಿವೆ ಗೀತಾ ಜೀವನ್ ಮತ್ತು ಜಿಲ್ಲಾಧಿಕಾರಿ ಸೆಂಥಿಲ್ ರಾಜ್ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಉಪಹಾರ ಸೇವಿಸಿದ್ದಾರೆ. ಜಾತಿ ತಾರತಮ್ಯ ಮಾಡದಂತೆ ಪೋಷಕರಿಗೆ ತಿಳಿ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read