BREAKING: ಎಸ್.ಎಂ. ಕೃಷ್ಣಗೆ ಪದ್ಮವಿಭೂಷಣ, ಸುಧಾಮೂರ್ತಿ, ಎಸ್.ಎಲ್. ಭೈರಪ್ಪರಿಗೆ ಪದ್ಮಭೂಷಣ

ನವದೆಹಲಿ: 2023 ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟಿಸಲಾಗಿದೆ. 106 ಸಾಧಕರಿಗೆ ಪ್ರಶಸ್ತಿ ನೀಡಲಾಗುವುದು.  ಎಸ್.ಎಂ. ಕೃಷ್ಣ ಸೇರಿದಂತೆ ಆರು ಸಾಧಕರಿಗೆ ಪದ್ಮವಿಭೂಷಣ, 9 ಸಾಧಕರಿಗೆ ಪದ್ಮಭೂಷಣ ಗೌರವ, 91 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಸಮಾಜವಾದಿ ಪಕ್ಷದ ನೇತಾರ ದಿವಂಗತ ಮುಲಾಯಂ ಸಿಂಗ್ ಯಾದವ್, ಓಆರ್ಎಸ್ ಪ್ರವರ್ತಕ ದಿವಂಗತ ದಿಲೀಪ್ ಮಹಲನಾಬಿಸ್, ಸಂಗೀತಗಾರ ಜಾಕೀರ್ ಹುಸೇನ್, ಶ್ರೀನಿವಾಸ್ ವರ್ಧನ್ ಪದ್ಮವಿಭೂಷಣ ಸ್ವೀಕರಿಸಲಿದ್ದಾರೆ.

106 ಸಾಧಕರ ಪೈಕಿ ಕರ್ನಾಟಕದ 8 ಸಾಧಕರಿಗೆ ಪ್ರಶಸ್ತಿ ನೀಡಲಾಗುವುದು. ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರಿಗೆ ಪದ್ಮವಿಭೂಷಣ, ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಅವರಿಗೆ ಪದ್ಮಭೂಷಣ, ಸಾಹಿತಿ ಎಸ್.ಎಲ್. ಭೈರಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read