KSRTC ಯಿಂದ ವಿವಿಧೆಡೆ ಪ್ಯಾಕೇಜ್ ಟೂರ್; ಇಲ್ಲಿದೆ ವಿವರ

Karnataka State Transport Corporation launches special monsoon tour packages- The New Indian Express

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ವಾರಾಂತ್ಯದಲ್ಲಿ ಬೆಂಗಳೂರಿನಿಂದ ರಾಜ್ಯದ ವಿವಿಧ ಪ್ರವಾಸಿ ಸ್ಥಳಗಳಿಗೆ ಪ್ಯಾಕೇಜ್ ಟೂರ್ ಆಯೋಜಿಸಲಾಗಿದ್ದು, ಇದರ ವಿವರ ಇಂತಿದೆ.

ಜೋಗ ಜಲಪಾತ ಪ್ರವಾಸ: ಶುಕ್ರವಾರ ರಾತ್ರಿ 9:30ಕ್ಕೆ ಬೆಂಗಳೂರಿನಿಂದ ಹೊರಟು ಶನಿವಾರ ಬೆಳಿಗ್ಗೆ 5ಕ್ಕೆ ಸಾಗರ ತಲುಪಲಿದ್ದು, ಅಲ್ಲಿ ವಿಶ್ರಾಂತಿ – ಉಪಹಾರದ ಬಳಿಕ ವರದಹಳ್ಳಿಗೆ, ವರದಾಮೂಲ ಇಕ್ಕೇರಿ, ಕೆಳದಿ ಸುತ್ತಾಡಿಕೊಂಡು ಮಧ್ಯಾಹ್ನ ಊಟಕ್ಕೆ ಸಾಗರ ತಲುಪಲಿದೆ.

ಊಟವಾದ ಬಳಿಕ ಜೋಗಕ್ಕೆ ತೆರಳಿ ಜಲಪಾತ ವೀಕ್ಷಣೆ ನಂತರ ಸಂಜೆ 7ಕ್ಕೆ ಮತ್ತೆ ಸಾಗರ ವಾಪಸ್ ಬಂದು ಶಾಪಿಂಗ್ – ಊಟ ಮುಗಿಸಿಕೊಂಡು ರಾತ್ರಿ 10 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 5 ಗಂಟೆಗೆ ಬೆಂಗಳೂರು ತಲುಪಲಿದೆ. ಮೊದಲ ಪ್ರವಾಸ ಆಗಸ್ಟ್ 11ರಿಂದ ಆರಂಭಗೊಳ್ಳಲಿದ್ದು, ವಯಸ್ಕರಿಗೆ 2,500 ರೂಪಾಯಿ ಹಾಗೂ ಮಕ್ಕಳಿಗೆ 2,300 ರೂಪಾಯಿ ಪ್ರಯಾಣದರ ನಿಗದಿ ಮಾಡಲಾಗಿದೆ.

ಗಗನಚುಕ್ಕಿ ಪ್ರವಾಸ: ಬೆಂಗಳೂರಿನಿಂದ ಬೆಳಿಗ್ಗೆ 6-30 ಕ್ಕೆ ಹೊರಟು ಮದ್ದೂರಿನಲ್ಲಿ ಉಪಹಾರ ಮುಗಿಸಿಕೊಂಡ ಬಳಿಕ ಸೋಮನಾಥಪುರ, ತಲಕಾಡು ತಲುಪಲಿದೆ. ತಲಕಾಡಿನಲ್ಲಿ ಊಟದ ವಿರಾಮ ಇರಲಿದ್ದು ನಂತರ ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ ವೀಕ್ಷಿಸಿ ಸಂಜೆ 6-15ಕ್ಕೆ ಹೊರಟು ರಾತ್ರಿ 9ಕ್ಕೆ ಬೆಂಗಳೂರು ತಲುಪಲಿದೆ. ಊಟ – ಉಪಹಾರ ಹೊರತುಪಡಿಸಿ ವಯಸ್ಕರಿಗೆ 450 ರೂಪಾಯಿ ಹಾಗೂ ಮಕ್ಕಳಿಗೆ 300 ರೂಪಾಯಿ ದರ ನಿಗದಿಪಡಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7760990287 ಅಥವಾ 7760990988 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read