ಒಬ್ಬರ ಹತ್ತಿರ ತಾಳಿ ಕಟ್ಟಿಸಿಕೊಂಡು, ಇನ್ನೊಬ್ಬರ ಜೊತೆ ಸಂಸಾರ ಮಾಡಬಾರದು : ಮಾಜಿ ಸಚಿವ K.S ಈಶ್ವರಪ್ಪ

ರಾಯಚೂರು : ಒಬ್ಬರ ಹತ್ತಿರ ತಾಳಿ ಕಟ್ಟಿಸಿಕೊಂಡು ಇನ್ನೊಬ್ಬರ ಜೊತೆ ಸಂಸಾರ ಮಾಡಬಾರದು ಎಂದು ಮಾಜಿ ಸಚಿವ ಕೆ,ಎಸ್ ಈಶ್ವರಪ್ಪ ಅಸಮಾಧಾನ ಹೊರ ಹಾಕಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಎಸ್.ಟಿ.ಸೋಮಶೇಖರ್, ಹೆಬ್ಬಾರ್ ವಿರುದ್ಧ K.S.ಈಶ್ವರಪ್ಪ ಅಸಮಾಧಾನ ಹೊರ ಹಾಕಿದರು.

ಬಿಜೆಪಿಯಲ್ಲಿ ಇರುವುದಾದರೆ ಇರಿ, ಇಲ್ಲದಿದ್ದರೆ ಹೋಗಿ.. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದ ಮೇಲೆ ಗೆಲ್ಲಿಸಿ ಮಂತ್ರಿ ಮಾಡಲಾಯ್ತು.. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಬಗ್ಗೆ ಒಲವಾಗಿದೆ.. ಬಿಜೆಪಿಯಲ್ಲಿ ಇರುವ ಆಸಕ್ತಿ ಇಲ್ಲ ಅಂದರೆ ಕಾಂಗ್ರೆಸ್ಗೆ ಹೋಗಲಿ.. ನಮಗೆ ಎಸ್.ಟಿ.ಸೋಮಶೇಖರ್, ಹೆಬ್ಬಾರ್ ಬುದ್ಧಿ ಹೇಳೋದು ಬೇಡ.. ಎಂದು ರಾಯಚೂರಿನಲ್ಲಿ ಬಿಜೆಪಿ ಮಾಜಿ ಶಾಸಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ, ಆರ್ಟಿಕಲ್ 370 ಕಿತ್ತು ಬೀಸಾಕಾಗಿದೆ. ನಮ್ಮ ಎರಡು ಕನಸು ಈಡೇರಿದೆ. ರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದಕ್ಕೆ ಸಾಕ್ಷಿ ಕೊಡಿ ಅಂತಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಅಸಮಾಧಾನ ಹೊರಹಾಕಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read