ALERT : ‘ಕ್ಯಾನ್ಸರ್’ ಗೆ ಬಲಿಯಾಗುವ 4 ಮಂದಿಯಲ್ಲಿ ಒಬ್ಬರು ತಂಬಾಕು ಸೇವನೆಯ ಕಾರಣಕ್ಕೆ ಸಾವನ್ನಪ್ಪುತ್ತಿದ್ದಾರೆ : CM ಸಿದ್ದರಾಮಯ್ಯ ಎಚ್ಚರಿಕೆ

ಬೆಂಗಳೂರು : ಕ್ಯಾನ್ಸರ್ ಗೆ ಬಲಿಯಾಗುವ 4 ಮಂದಿಯಲ್ಲಿ ಒಬ್ಬರು ತಂಬಾಕು ಸೇವನೆಯ ಕಾರಣಕ್ಕೆ ಸಾವನ್ನಪ್ಪುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ‘’ಜಗತ್ತಿನಲ್ಲಿ ಕ್ಯಾನ್ಸರ್ ರೋಗಕ್ಕೆ ಬಲಿಯಾಗುವ ಪ್ರತಿ 4 ಮಂದಿಯಲ್ಲಿ ಒಬ್ಬರು ತಂಬಾಕು ಉತ್ಪನ್ನಗಳ ಸೇವನೆಯ ಕಾರಣಕ್ಕೆ ಸಾವನ್ನಪ್ಪುತ್ತಿದ್ದಾರೆ. ತಂಬಾಕು ಎಂಬ ಮಹಾಮಾರಿ ಮನುಷ್ಯನಿಗೆ ಅರಿವಿಲ್ಲದಂತೆಯೇ ಆತನನ್ನು ಸಾವಿನ ದವಡೆಗೆ ಕೊಂಡೊಯ್ಯುತ್ತಿದೆ. ವಿಶ್ವ ತಂಬಾಕು ರಹಿತ ದಿನವಾದ ಇಂದು ಪ್ರತಿಯೊಬ್ಬರು ತಂಬಾಕಿನ ಉತ್ಪನ್ನಗಳನ್ನು ತ್ಯಜಿಸುವ ಪ್ರತಿಜ್ಞೆಗೈದು, ಸ್ವಸ್ಥ ಬದುಕಿನತ್ತ ಹೆಜ್ಜೆಯನಿಡಬೇಕೆಂಬುದು ನನ್ನ ಆಶಯ. ನಿಮಗಾಗಿ, ನಿಮ್ಮ ಕುಟುಂಬಕ್ಕಾಗಿ ತಂಬಾಕಿನಿಂದ ದೂರವಿರಿ’’ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read