ಭೂಸ್ವಾಧೀನಕ್ಕೆ ಒಳಪಡುವ ಜಮೀನಿನ ದಾಖಲೆಗಳ ಸಲ್ಲಿಸಲು ಸೂಚನೆ

ಹಾಸನ : ರಾಷ್ಟ್ರೀಯ ಹೆದ್ದಾರಿ-373 ಚಿಕ್ಕಮಗಳೂರು-ಬಿಳಿಕೆರೆ ರಸ್ತೆಯ ಕಿ.ಮೀ 27.780 ರಿಂದ ಕಿ.ಮೀ 57.320 ರವರೆಗೆ (ಬೇಲೂರು ತಾಲ್ಲೂಕಿನ ಮುದಿಗೆರೆಯಿಂದ ಹಾಸನ ನಗರದ ತಣ್ಣೀರುಹಳ್ಳ ವೃತ್ತದವರೆಗೆ) ಚತುಷ್ಪಥ ರಸ್ತೆ ಅಭಿವೃದ್ದಿ (ಪ್ಯಾಕೇಜ್-2). (ಜಾಬ್ ನಂ.ಎನ್.ಹೆಚ್373-ಕೆಎನ್ಟಿ-2022-23-988)” ಕಾಮಗಾರಿಗೆ ಸಂಬಂಧಿಸಿದಂತೆ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳ ಮಾಲೀಕರುಗಳಿಗೆ 3’ಉ’ ಅವಾರ್ಡ್ ನೋಟೀಸ್ಗಳನ್ನು ನೀಡಲಾಗಿರುತ್ತದೆ. 3’ಉ’ ಅವಾರ್ಡ್ ನೋಟೀಸ್ಗಳಲ್ಲಿ ನಮೂದಿಸಿರುವ ದಾಖಲೆಗಳನ್ನು ವಿಶೇಷ ಭೂಸ್ವಾಧೀನಾಧಿಕಾರಿ ಇವರಿಗೆ ಸಲ್ಲಿಸಿದ ತರುವಾಯ ಪರಿಹಾರ ಮೊತ್ತವನ್ನು ಸಂದಾಯ ಮಾಡಲಾಗುತ್ತದೆ.

ಈವರೆಗೂ ದಾಖಲೆಗಳನ್ನು ಸಲ್ಲಿಸದೇ ಇರುವ ಭೂಮಾಲೀಕರುಗಳು ಸೆ.23 ರ ಒಳಗಾಗಿ ಅವಶ್ಯ ದಾಖಲೆಗಳನ್ನು ಈ ಕೆಳಕಾಣಿಸಿದ ಕಚೇರಿ ವಿಳಾಸಕ್ಕೆ ಅಥವಾ ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿಗಳು, ಲೋಕೋಪಯೋಗಿ ಇಲಾಖೆಯ ಆವರಣ, ಕೆ.ಆರ್.ಸರ್ಕಲ್, ಬೆಂಗಳೂರು ಇವರ ಕಚೇರಿಗೆ ಸಲ್ಲಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read