ಶ್ರೀನಗರ: 26 ಜೀವಗಳನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯ ಕೆಲವು ದಿನಗಳ ನಂತರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಕಣಿವೆ ಕ್ರಮೇಣ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ.
ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದರೂ, ಈ ಪ್ರದೇಶವು ಮತ್ತೊಮ್ಮೆ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಸ್ವಾಗತಿಸಲು ಪ್ರಾರಂಭಿಸಿದೆ.
ಕೋಲ್ಕತ್ತಾ ಮತ್ತು ಬೆಂಗಳೂರಿನ ಪ್ರವಾಸಿಗರು, ಪ್ರದೇಶದ ಸುರಕ್ಷತೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದು, ಕಳವಳಗಳ ಹೊರತಾಗಿಯೂ ಪಹಲ್ಗಾಮ್ಗೆ ಭೇಟಿ ಸೇರಿದಂತೆ ಅನೇಕರು ತಮ್ಮ ಪ್ರಯಾಣ ಯೋಜನೆಗಳೊಂದಿಗೆ ಮುಂದುವರಿಯುತ್ತಿದ್ದಾರೆ.
ಕಾಶ್ಮೀರ ಈಗ ಸುರಕ್ಷಿತವಾಗಿದೆ, ಎಲ್ಲವೂ ಮುಕ್ತವಾಗಿದೆ, ಪ್ರವಾಸಿಗರು ಸುರಕ್ಷಿತರಾಗಿದ್ದಾರೆ, ಎಲ್ಲರೂ ಬರುತ್ತಿದ್ದಾರೆ, ಆದ್ದರಿಂದ ನೀವು ಬರುವ ಪ್ಲಾನ್ ಮಾಡಿಕೊಂಡಿದ್ದರೆ ದಯವಿಟ್ಟು ಬನ್ನಿ ಎಂದು ಕೋಲ್ಕತ್ತಾದ ಪ್ರವಾಸಿಗರೊಬ್ಬರು ಹೇಳಿದ್ದಾರೆ.
ಗುಜರಾತ್ನ ಸೂರತ್ನ ಪ್ರವಾಸಿ ಮೊಹಮ್ಮದ್ ಅನಸ್ ಅದೇ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಪಹಲ್ಗಾಮ್ನಲ್ಲಿ ವ್ಯವಹಾರ ಎಂದಿನಂತೆ ಮುಂದುವರೆದಿದೆ.
ಚಿಂತಿಸಲು ಏನೂ ಇಲ್ಲ. ಸೈನ್ಯ, ಸರ್ಕಾರ ಮತ್ತು ಸ್ಥಳೀಯರು ನಮ್ಮೊಂದಿಗಿದ್ದಾರೆ ಮತ್ತು ನಮ್ಮ ಸುರಕ್ಷತೆಯನ್ನು ಖಚಿತಪಡಿಸುತ್ತಿದ್ದಾರೆ. ಘಟನೆಯ ನಂತರ ನಾವು ಭಯಭೀತರಾಗಿದ್ದೇವೆ, ನಾವು ತಕ್ಷಣ ಹೊರಡಲು ಬಯಸಿದ್ದೆವು, ಆದರೆ ಸ್ಥಳೀಯರು ಮತ್ತು ಸೈನ್ಯವು ನಮ್ಮನ್ನು ಪ್ರೇರೇಪಿಸಿತು ಮತ್ತು ನಾವು ನಮ್ಮ ಪ್ರವಾಸವನ್ನು ಮುಂದುವರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ನಾವು 3-4 ದಿನಗಳಿಂದ ಇಲ್ಲಿದ್ದೇವೆ ಮತ್ತು ನಾವು ತುಂಬಾ ಸುರಕ್ಷಿತವಾಗಿದ್ದೇವೆ. ನಿಮ್ಮ ದೇಶವು ತುಂಬಾ ಸುಂದರವಾಗಿದೆ, ಮತ್ತು ನಮಗೆ ಯಾವುದೇ ಸಮಸ್ಯೆಗಳಿಲ್ಲ. ಕಾಶ್ಮೀರವು ಸುಂದರ ಮತ್ತು ಸುರಕ್ಷಿತವಾಗಿದೆ. ಜನರು ತುಂಬಾ ದಯೆಯುಳ್ಳವರು ನಾವು ಕಾಶ್ಮೀರಕ್ಕೆ ಬರುವ ಒಂದು ದಿನದ ಮೊದಲು ಘಟನೆಯ ಬಗ್ಗೆ ಕೇಳಿದ್ದೇವೆ. ನಾವು ಆದರೂ ಇಲ್ಲಿಗೆ ಬಂದಿದ್ದೇವೆ. ನಾವು ಸುರಕ್ಷಿತವಾಗಿರುತ್ತೇವೆ ಎಂದು ಕ್ರೊಯೇಷಿಯಾದ ಮಹಿಳೆಯೊಬ್ಬರು ಹೇಳಿದ್ದಾರೆ.
ಕ್ರೊಯೇಷಿಯಾದ ಮತ್ತೊಬ್ಬ ಪ್ರವಾಸಿ, ಪಹಲ್ಗಾಮ್ನಂತಹ ಘಟನೆಗಳು ಎಲ್ಲಿ ಬೇಕಾದರೂ ಸಂಭವಿಸಬಹುದು. ನನಗೆ ಇಲ್ಲಿ ಅದ್ಭುತವೆನಿಸಿತು. ನನಗೆ ಇಲ್ಲಿ ತುಂಬಾ ಸ್ನೇಹಿತರು ಸಿಕ್ಕರು. ಜನರು ತುಂಬಾ ಸ್ವಾಗತಿಸುತ್ತಾರೆ. ನನಗೆ ಯಾವುದೇ ಭಯ ಅನಿಸಲಿಲ್ಲ. ನನಗೆ ಅನಾನುಕೂಲ ಅನಿಸಲಿಲ್ಲ. ನಡೆದ ಘಟನೆ ಸಾಂದರ್ಭಿಕವಾಗಿ ನಡೆಯುತ್ತದೆ ಮತ್ತು ಇದು ಎಲ್ಲೆಡೆ ನಡೆಯುತ್ತದೆ. ಜಗತ್ತಿನಲ್ಲಿ ಎಲ್ಲಿಯೂ ಸುರಕ್ಷಿತ ಸ್ಥಳವಿಲ್ಲ ಎಂದು ಅವರು ಹೇಳಿದ್ದಾರೆ.
ಏಪ್ರಿಲ್ 22 ರಂದು, ಪಾಕ್ ಮೂಲದ ಸಂಘಟನೆಗೆ ಸಂಬಂಧಿಸಿದ ಭಯೋತ್ಪಾದಕರ ಗುಂಪೊಂದು ಜನಪ್ರಿಯ ತಾಣವಾದ ಪಹಲ್ಘಾಮ್ನ ಬೈಸರನ್ ಹುಲ್ಲುಗಾವಲಿನಲ್ಲಿ ರಜೆಯಲ್ಲಿದ್ದ ಪ್ರವಾಸಿಗರ ಮೇಲೆ ಗುಂಡು ಹಾರಿಸಿ 26 ಜನರ ಹತ್ಯೆ ಮಾಡಿತ್ತು.
ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬೀಳುವ ಭಯದಿಂದ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರವಾಸಿಗರು ಕಾಶ್ಮೀರ ಪ್ರವಾಸವನ್ನು ತಪ್ಪಿಸದಂತೆ ಮನವಿ ಮಾಡಿದ್ದರು. ಪ್ರವಾಸಿಗರ ಭಯವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ರಜೆಯ ಮೇಲೆ ಇಲ್ಲಿಗೆ ಬರುವವರು ಯಾವುದೇ ಭಯವನ್ನು ಅನುಭವಿಸಲು ಬಯಸುವುದಿಲ್ಲ. ಆದರೆ ಈ ಸಮಯದಲ್ಲಿ ಅವರು ಕಾಶ್ಮೀರವನ್ನು ತೊರೆದರೆ ಅದು ನಮ್ಮ ಶತ್ರುಗಳನ್ನು ಗೆಲ್ಲುವಂತೆ ಮಾಡಬಹುದು ಎಂದಿದ್ದರು.
ನಟ ಅತುಲ್ ಕುಲಕರ್ಣಿ ಭಾನುವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಬಂದಿಳಿದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದರು. ಕುಲಕರ್ಣಿ ಭಾನುವಾರ ಮುಂಜಾನೆ ಶ್ರೀನಗರ ತಲುಪಿ ನೇರವಾಗಿ ಪಹಲ್ಗಾಮ್ಗೆ ಕಾರಿನಲ್ಲಿ ಹೋದರು.
ಭಯೋತ್ಪಾದನಾ ದಾಳಿಯ ಉದ್ದೇಶ ಪ್ರವಾಸಿಗರು ಕಾಶ್ಮೀರಕ್ಕೆ ಬರದಂತೆ ತಡೆಯುವುದಾಗಿತ್ತು. ನಾವು ಕಾಶ್ಮೀರಕ್ಕೆ ಪ್ರಯಾಣಿಸುವ ನಮ್ಮ ಯೋಜನೆಗಳನ್ನು ರದ್ದುಗೊಳಿಸಿದರೆ, ಭಯೋತ್ಪಾದಕರ ಉದ್ದೇಶಗಳು ಯಶಸ್ವಿಯಾಗಲು ನಾವು ಅವಕಾಶ ನೀಡಿದಂತೆ ಎಂದು ತಿಳಿಸಿದರು.
ಮುಂಬೈ-ಶ್ರೀನಗರ ವಿಮಾನವು ಬಹುತೇಕ ಖಾಲಿಯಾಗಿತ್ತು, ಆದರೆ ಅದು ಸಾಮಾನ್ಯವಾಗಿ ಪೂರ್ಣ ಸಾಮರ್ಥ್ಯದೊಂದಿಗೆ ಸಂಚರಿಸುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.
#WATCH | Pahalgam, J&K: On his visit to #Pahalgam, Actor Atul Kulkarni says "If I had gone somewhere else, then I would not be able to convey the message I wanted to spread. We always say that we should do something for the country. This is for the country, the people of the… pic.twitter.com/blUwtKAEag
— ANI (@ANI) April 27, 2025
"Defying fear, embracing beauty: Tourists return to Pahalgam with hope and confidence"
— ANI Digital (@ani_digital) April 27, 2025
Read @ANI Story https://t.co/escoLDuNEw#PahalgamTerrroristAttack #tourists pic.twitter.com/y9JIndMuRY
"Aana zaroori hai": Atul Kulkarni visits Kashmir, appeals tourists to return after Pahalgam terror attack
— ANI Digital (@ani_digital) April 27, 2025
Read @ANI Story | https://t.co/o8JnVEzcYn#AtulKulkarni #Kashmir #Pahalgam pic.twitter.com/QCSZazhdvB