ನವದೆಹಲಿ: ನಕ್ಸಲಿಸಂ ವಿರುದ್ಧದ ಹೋರಾಟದಲ್ಲಿ ಮಹತ್ವದ ಪ್ರಗತಿಯಲ್ಲಿ ಭಾರತೀಯ ಭದ್ರತಾ ಪಡೆಗಳು ಛತ್ತೀಸ್ಗಢ-ತೆಲಂಗಾಣ ಗಡಿಯಲ್ಲಿರುವ ಕರ್ರೆಗುಟ್ಟ ಬೆಟ್ಟಗಳಲ್ಲಿ(ಕೆಜಿಹೆಚ್) ನಡೆದ ಬೃಹತ್ ಕಾರ್ಯಾಚರಣೆಯಲ್ಲಿ 31 ಕುಖ್ಯಾತ ನಕ್ಸಲರನ್ನು ಹತ್ಯೆ ಮಾಡಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಘೋಷಿಸಿದ್ದಾರೆ.
ಸವಾಲಿನ ಹವಾಮಾನ ಮತ್ತು ಪ್ರತಿಕೂಲ ಭೂಪ್ರದೇಶದಲ್ಲಿ ನಡೆಸಿದ 21 ದಿನಗಳ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಹೇಳಿದ ಅವರು ಸಿಆರ್ಪಿಎಫ್, ಎಸ್ಟಿಎಫ್ ಮತ್ತು ಡಿಆರ್ಜಿ ಘಟಕಗಳ ಕಾರ್ಯಾಚರಣೆಯ ಧೈರ್ಯವನ್ನು ಶ್ಲಾಘಿಸಿದ್ದಾರೆ.
ಒಂದು ಕಾಲದಲ್ಲಿ ಅಸಾಧಾರಣ ನಕ್ಸಲ್ ಭದ್ರಕೋಟೆಯಾಗಿದ್ದ ಕರ್ರೆಗುಟ್ಟ ಬೆಟ್ಟಗಳು ಪಿಎಲ್ಜಿಎ ಬೆಟಾಲಿಯನ್ 1, ದಂಡಕಾರಣ್ಯ ವಿಶೇಷ ವಲಯ ಸಮಿತಿ(ಡಿಕೆಎಸ್ಜೆಡ್ಸಿ), ತೆಲಂಗಾಣ ರಾಜ್ಯ ಸಮಿತಿ(ಟಿಎಸ್ಸಿ) ಮತ್ತು ಕೇಂದ್ರ ಪ್ರಾದೇಶಿಕ ಕಮಾಂಡ್(ಸಿಆರ್ಸಿ) ಸೇರಿದಂತೆ ಪ್ರಮುಖ ನಕ್ಸಲ್ ಸಂಘಟನೆಗಳಿಗೆ ಏಕೀಕೃತ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದ್ದವು. ಈ ಗುಂಪುಗಳು ಸುಧಾರಿತ ತರಬೇತಿ, ಕಾರ್ಯತಂತ್ರದ ಯೋಜನೆ ಮತ್ತು ಶಸ್ತ್ರಾಸ್ತ್ರ ತಯಾರಿಕೆಗಾಗಿ ಈ ಸ್ಥಳವನ್ನು ಬಳಸಿಕೊಂಡವು.
ಎಡಪಂಥೀಯ ಉಗ್ರವಾದದ ಶಕ್ತಿಯನ್ನು ಸಂಕೇತಿಸುತ್ತಿದ್ದ ಬೆಟ್ಟದ ಮೇಲೆ ಭಾರತದ ತ್ರಿವರ್ಣ ಧ್ವಜವು ಈಗ ಹೆಮ್ಮೆಯಿಂದ ಹಾರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಜ್ಞೆ ಮಾಡಿದಂತೆ ಮಾರ್ಚ್ 31, 2026 ರೊಳಗೆ ಭಾರತವನ್ನು “ನಕ್ಸಲ್ ಮುಕ್ತ” ಗೊಳಿಸುವ ಸರ್ಕಾರದ ಬದ್ಧತೆ ಇದಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
#NaxalFreeBharat के संकल्प में एक ऐतिहासिक सफलता प्राप्त करते हुए सुरक्षा बलों ने नक्सलवाद के विरुद्ध अब तक के सबसे बड़े ऑपरेशन में छत्तीसगढ़-तेलंगाना सीमा के कुर्रगुट्टालू पहाड़ (KGH) पर 31 कुख्यात नक्सलियों को मार गिराया।
— Amit Shah (@AmitShah) May 14, 2025
जिस पहाड़ पर कभी लाल आतंक का राज था, वहाँ आज शान से…