ವಿಚ್ಛೇದಿತ ಪತ್ನಿ ಕೊಲೆಗೈದ ಪತಿಗೆ ಮೂರು ವರ್ಷ ಜೈಲು ಶಿಕ್ಷೆ

ದಾವಣಗೆರೆ: ಕೋರ್ಟ್ ಆದೇಶದಂತೆ ಜೀವನಾಂಶಕ್ಕೆ ಅರ್ಹತೆ ಪಡೆದಿದ್ದ ವಿಚ್ಛೇದಿತ ಪತ್ನಿಗೆ ಜೀವನಾಂಶಶ ಕೊಡದೆ ಕೊಲೆ ಮಾಡಿದ್ದ ಪತಿಗೆ ದಾವಣಗೆರೆಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಜಗಳೂರು ತಾಲೂಕಿನ ಅಸಗೋಡು ಗ್ರಾಮದ ಮಾರುತಿ ಶಿಕ್ಷೆಗೆ ಗುರಿಯಾದವ. ಪತ್ನಿ ಚೌಡಮ್ಮ ಅವರನ್ನು 2021 ರಲ್ಲಿ ಮಾರುತಿ ಕೊಲೆ ಮಾಡಿದ್ದ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ಸೋಮವಾರ ಆದೇಶ ಹೊರಡಿಸಿದ್ದಾರೆ.

ಹರಪನಹಳ್ಳಿ ತಾಲೂಕಿನ ಸುಣಗಾರ ಕೇರಿಯ ಚೌಡಮ್ಮ ಮತ್ತು ಮಾರುತಿ 2013ರಲ್ಲಿ ಮದುವೆಯಾಗಿದ್ದು, ಆರಂಭದಲ್ಲಿ ಅನ್ಯೋನ್ಯವಾಗಿದ್ದರು. ನಂತರ ದಂಪತಿಯ ನಡುವೆ ಮನಸ್ತಾಪ ಉಂಟಾಗಿ ಬೇರೆಯಾಗಿದ್ದರು. ವಿಚ್ಛೇದನ ನೀಡಿದ ನ್ಯಾಯಾಲಯ ತಿಂಗಳಿಗೆ 4,000 ರೂ. ಜೀವನಾಂಶ ನೀಡುವಂತೆ ಆದೇಶಿಸಿತ್ತು. ಆದರೆ ಮಾರುತಿ ಪತ್ನಿಯ ಕೊಲೆಗೈದಿದ್ದ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read