ಪ್ರದೀಪ್ ಈಶ್ವರ್ ಎರಡನೇ ಹುಚ್ಚ ವೆಂಕಟ್: ಬಿಜೆಪಿ ಸಂಸದ ಮುನಿಸ್ವಾಮಿ

ಬೆಂಗಳೂರು: ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ ಮತ್ತು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಡುವೆ ವಾಕ್ಸಮರ ನಡೆದಿದೆ.

ಬಿಜೆಪಿ ಸಂಸದ ಮುನಿಸ್ವಾಮಿ ಚೈಲ್ಡ್ ಆರ್ಟಿಸ್ಟ್ ಇದ್ದಂಗೆ. ಅವರು ಮುನಿಸ್ವಾಮಿ ಅಲ್ಲ, ಮನಿಸ್ವಾಮಿ ಎಂದು ಪ್ರದೀಪ್ ಈಶ್ವರ್ ಲೇವಡಿ ಮಾಡಿದ್ದಾರೆ. ಚಿಂತಾಮಣಿ, ಕೋಲಾರದ ಪ್ರಭಾವಿ ನಾಯಕರು ಮನಸು ಮಾಡದಿದ್ದರೆ ಮುನಿಸ್ವಾಮಿ ಹೇಗೆ ಸಂಸದರಾಗುತ್ತಿದ್ದರು? ಅವರಿಗೆ ಒಬ್ಬ ಸಂಸದ ಹೇಗಿರಬೇಕು ಎನ್ನುವುದೇ ಗೊತ್ತಿಲ್ಲ. ನನಗೆ ಇನ್ನೂ ಐದು ವರ್ಷಕ್ಕೆ ಚುನಾವಣೆ ಇದೆ. ಮುಂದಿನ ವರ್ಷವೇ ಮುನಿಸ್ವಾಮಿ ಅವರ ಹಬ್ಬ ಇದ್ದು ನೋಡೇ ಬಿಡೋಣ ಎಂದು ಸವಾಲು ಹಾಕಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಸಂಸದ ಮುನಿಸ್ವಾಮಿ ಅವರು, ಪ್ರದೀಪ್ ಈಶ್ವರ್ ಗೆ ರಾಜಕೀಯ ಪ್ರಬುದ್ಧತೆ ಇಲ್ಲ. ನನ್ನ ಹತ್ತಿರ ಟ್ಯೂಷನ್ ಗೆ ಬರಲಿ. ಮೊದಲ ಬಾರಿಗೆ ಶಾಸಕರಾಗಿರುವ ಪ್ರದೀಪ್ ಈಶ್ವರ್ ಎರಡನೇ ಹುಚ್ಚ ವೆಂಕಟ್ ರೀತಿ ಆಡುತ್ತಿದ್ದಾರೆ. ಇಂತಹ ಡ್ರಾಮಾ ಕಂಪನಿಗಳನ್ನು ಬಹಳ ನೋಡಿದ್ದೇನೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read