ಮುಷ್ಕರ ಕೈಗೊಂಡ ಪೌರ ಕಾರ್ಮಿಕರು, ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿದ ನಗರಸಭೆ ಅಧ್ಯಕ್ಷ

ಹಾಸನ: ನೇರ ವೇತನ ಪಾವತಿಗೆ ಆಗ್ರಹಿಸಿ ನಗರಸಭೆ ಹೊರಗುತ್ತಿಗೆ ನೌಕರರು ಮುಷ್ಕರ ಕೈಗೊಂಡಿದ್ದಾರೆ. ಹಾಸನ ನಗರಸಭೆ ಹೊರಗುತ್ತಿಗೆ, ಕಸ ಸಂಗ್ರಹ ಆಟೋ ಚಾಲಕರು ಮುಷ್ಕರ ಕೈಗೊಂಡಿದ್ದು, ಕಳೆದ ಒಂದು ವಾರದಿಂದ ಕಸ ಸಂಗ್ರಹ ಕಾರ್ಯ ಸಂಪೂರ್ಣ ಸ್ಥಗಿತವಾಗಿದೆ.

ಇದರಿಂದಾಗಿ ಜನರಿಗೆ ತೊಂದರೆಯಾಗಿದ್ದು, ಹಾಸನ ನಗರಸಭೆ ಅಧ್ಯಕ್ಷ ಮೋಹನ್ ಖುದ್ದಾಗಿ ತಾವೇ ಕಸ ಸಂಗ್ರಹಕ್ಕೆ ಇಳಿದಿದ್ದಾರೆ. 34ನೇ ವಾರ್ಡ್ ವ್ಯಾಪ್ತಿಯಲ್ಲಿ ಕೆಲವು ಸದಸ್ಯರೊಂದಿಗೆ ಕಸ ಸಂಗ್ರಹಿಸತೊಡಗಿದ್ದಾರೆ.

ಮನೆ ಮನೆಗೆ ತೆರಳಿ ನಗರಸಭೆ ಅಧ್ಯಕ್ಷ ಮೋಹನ್ ಕಸ ಸಂಗ್ರಹಿಸುತ್ತಿದ್ದಾರೆ. ಆಟೋ ಚಾಲನೆ ಮಾಡಿಕೊಂಡು ಕಸ ಸಂಗ್ರಹಿಸುತ್ತಿರುವ ಮೋಹನ್ ಅವರಿಗೆ ನಗರಸಭೆ ಕೆಲವು ಸದಸ್ಯರು ಕೂಡ ಸಾಥ್ ನೀಡಿದ್ದಾರೆ. ನಗರಸಭೆ ಅಧ್ಯಕ್ಷರ ಕಾರ್ಯಕ್ಕೆ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read