ಮುಡಾ ಪ್ರಕರಣ: ಕಾನೂನು, ರಾಜಕೀಯ ಹೋರಾಟದ ಬಗ್ಗೆ 18 ಸಚಿವರೊಂದಿಗೆ ಸಿಎಂ ಸುಧೀರ್ಘ ಚರ್ಚೆ

ಬೆಂಗಳೂರು: ಮುಡಾ ಪ್ರಕರಣದ ಹೈಕೋರ್ಟ್ ವಿಚಾರಣೆ ಮುಂದುವರೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ರಾತ್ರಿ ನಿವಾಸದಲ್ಲಿ ಸುದೀರ್ಘ ಸಭೆ ನಡೆಸಿದ್ದಾರೆ.

ಮುಂದಿನ ಕಾನೂನು ಮತ್ತು ರಾಜಕೀಯ ಹೋರಾಟದ ಬಗ್ಗೆ ಚರ್ಚಿಸಲು 18 ಸಚಿವರೊಂದಿಗೆ ಸಿಎಂ ಸಮಾಲೋಚನೆ ನಡೆಸಿದ್ದಾರೆ. ಸಚಿವರಾದ ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಡಾ.ಎಂ.ಸಿ. ಸುಧಾಕರ್, ಡಿ. ಸುಧಾಕರ್ ಸೇರಿದಂತೆ 18 ಸಚಿವರೊಂದಿಗೆ ಸಭೆ ನಡೆಸಿದ್ದಾರೆ.

ಶನಿವಾರ ಹೈಕೋರ್ಟ್ ನಲ್ಲಿ ನಡೆದ ಕಲಾಪದ ಬಗ್ಗೆ ಮತ್ತು ಮುಂದಿನ ಕಾನೂನು ಹೋರಾಟಗಳ ಕುರಿತಾಗಿ ವಿಸ್ತೃತ ಚರ್ಚೆ ನಡೆಸಲಾಗಿದೆ. ಬಿಜೆಪಿ, ಜೆಡಿಎಸ್ ವಿರುದ್ಧ ಮುಂದಿನ ರಾಜಕೀಯ ಹೋರಾಟದ ಬಗ್ಗೆಯೂ ಚರ್ಚೆ ನಡೆದಿದೆ. ಅಲ್ಲದೇ, ರಾಷ್ಟ್ರಪತಿಗಳ ಬಳಿಗೂ ವಿಷಯ ತೆಗೆದುಕೊಂಡು ಹೋಗಿ ಹೋರಾಟ ಮಾಡುವ ಬಗ್ಗೆಯೂ ಸಚಿವರೊಂದಿಗೆ ಸಿಎಂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read