ಪ್ರಕ್ಷುಬ್ಧತೆ ಅವಧಿಯಲ್ಲಿ ಮೌನ ತಾಳಿದ ಗಾಂಧಿ; ಶಾಲಾ ವಿದ್ಯಾರ್ಥಿ ವಾಚಿಸಿದ ಕವಿತೆಗೆ ಕಾಂಗ್ರೆಸ್‌ ಗರಂ

ಭೋಪಾಲ್: ಶಾಲಾ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಯೊಬ್ಬ ಮಹಾತ್ಮಾ ಗಾಂಧಿಯವರನ್ನು ಟೀಕಿಸುವ ಕವಿತೆಯನ್ನು ವಾಚಿಸಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಶಿಕ್ಷಣ ಇಲಾಖೆಯು ಸಿಯೋನಿಯ ಸಿಎಂ ರೈಸ್ ಶಾಲೆಯಲ್ಲಿ ಶಿಕ್ಷಕರೊಬ್ಬರಿಗೆ ಶೋಕಾಸ್ ನೋಟಿಸ್ ನೀಡಿದೆ.

ಮಹಾತ್ಮಾ ಗಾಂಧಿಯವರು ಪ್ರಕ್ಷುಬ್ಧತೆಯ ಅವಧಿಯಲ್ಲಿ ತಮ್ಮ “ಮೌನ”ವನ್ನು ಕಾಪಾಡಿಕೊಂಡರು ಎಂದು ಕವಿತೆಯಲ್ಲಿ ಹೇಳಲಾಗಿದೆ. ಸ್ವಾತಂತ್ರ ಬಂದದ್ದು ನೇಣುಗಂಬಕ್ಕೆ ಏರಿದ ಇತರ ಸ್ವಾತಂತ್ರ್ಯ ಹೋರಾಟಗಾರರಿಂದಲೋ ಅಥವಾ ನೂಲುವ ಚಕ್ರವೋ ಎಂದು ಕವಿತೆಯಲ್ಲಿ ಪ್ರಶ್ನಿಸಲಾಗಿದೆ.

ವೈರಲ್ ವೀಡಿಯೊದಲ್ಲಿ, ಸಿಯೋನಿಯ ಬಿಜೆಪಿ ಶಾಸಕ ದಿನೇಶ್ ರೈ ಮುನ್ಮುನ್ ಅವರು ಹುಡುಗ ಕವಿತೆಯನ್ನು ಓದುತ್ತಿದ್ದಂತೆ ಚಪ್ಪಾಳೆ ತಟ್ಟುತ್ತಿರುವುದು ಕಂಡುಬಂದಿದೆ.

ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಿದ ಶಿಕ್ಷಕರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ಪ್ರಾಂಶುಪಾಲರಿಂದ ವರದಿ ಕೇಳಲಾಗಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಕಮಲ್ ಕಿಶೋರ್ ಪಟೇಲ್ ಪಿಟಿಐಗೆ ತಿಳಿಸಿದ್ದಾರೆ.

ಶಿಕ್ಷಕರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಖುರಾನಾ ಮಾತನಾಡಿ, ಮಹಾತ್ಮ ಗಾಂಧೀಜಿಯವರನ್ನು ಅವಮಾನಿಸಲು ಬಿಜೆಪಿಯ ಸಿದ್ಧಾಂತವು ಮಗುವಿಗೆ ಕಲಿಸಿದ ಘಟನೆಗೆ ಕಾರಣವಾಗಿದೆ ಎಂದರು.

https://twitter.com/narendoc11/status/1623186213418201095?ref_src=twsrc%5Etfw%7Ctwcamp%5Etweetembed%7Ctwterm%5E1623186213418201095%7Ctwgr%5Ea74168a985b1239a7bbf35e420c726ac722244f2%7Ctwcon%5Es1_&ref_url=https%3A%2F%2Fwww.freepressjournal.in%2Feducation%2Fviral-video-student-recites-poem-critical-of-gandhi-at-school-function-sparks-row

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read