ಘಟಾನುಘಟಿಗಳಿಗೆ ಶಾಕ್: 12 ಸಚಿವರ ಸೋಲು; ಬಿಜೆಪಿಗೆ ಇರಿಸು ಮುರಿಸು ತಂದ ಫಲಿತಾಂಶ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಸಚಿವರ ಪೈಕಿ 12 ಜನ ಸೋಲು ಕಂಡಿದ್ದಾರೆ. ಬಸವರಾಜ ಬೊಮ್ಮಾಯಿ ಸಂಪುಟದ 12 ಮಂದಿ ಸಚಿವರು ಸೋಲು ಕಂಡಿದ್ದಾರೆ. ಹಾಲಿ ಸಚಿವರಾಗಿದ್ದವರಲ್ಲಿ ಎಸ್. ಅಂಗಾರ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಗಿತ್ತು. ಆನಂದ್ ಸಿಂಗ್ ಬದಲಿಗೆ ಅವರ ಪುತ್ರ ಸಿದ್ದಾರ್ಥ ಸಿಂಗ್ ಸ್ಪರ್ಧಿಸಿದ್ದರು. ಸಿದ್ದಾರ್ಥ ಸಿಂಗ್ ಸೋಲು ಕಂಡಿದ್ದಾರೆ.

ಸಚಿವರಾಗಿದ್ದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಕೆ. ಸುಧಾಕರ್, ವಿ. ಸೋಮಣ್ಣ, ಜೆ.ಸಿ. ಮಾಧುಸ್ವಾಮಿ, ಶ್ರೀರಾಮುಲು, ಎಂಟಿಬಿ ನಾಗರಾಜ್, ಶಂಕರ ಪಾಟೀಲ ಮುನೇನಕೊಪ್ಪ, ಬಿ.ಸಿ. ಪಾಟೀಲ್, ಕೆ.ಸಿ. ನಾರಾಯಣಗೌಡ, ಬಿ.ಸಿ. ನಾಗೇಶ್, ಹಾಲಪ್ಪ ಆಚಾರ್ ಸೋಲು ಕಂಡಿದ್ದಾರೆ.

ಆರ್. ಅಶೋಕ್ ಕನಕಪುರದಲ್ಲಿ ಸೋಲು ಕಂಡಿದ್ದು, ಪದ್ಮನಾಭನಗರದಲ್ಲಿ ಜಯಗಳಿಸಿದ್ದಾರೆ. ಸಿ.ಎನ್. ಅಶ್ವತ್ಥ್ ನಾರಾಯಣ, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜ, ಕೆ. ಗೋಪಾಲಯ್ಯ, ಮುನಿರತ್ನ, ಆರಗ ಜ್ಞಾನೇಂದ್ರ, ವಿ. ಸುನಿಲ್ ಕುಮಾರ್, ಶಿವರಾಮ ಹೆಬ್ಬಾರ್, ಪ್ರಭು ಚೌಹಾಣ್, ಶಶಿಕಲಾ ಜೊಲ್ಲೆ ಅವರು ಜಯಗಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read