ಸಿದ್ಧರಾಮಯ್ಯ ಹೆಸರು ಬಳಸಿ ಇಡಿ ಮಾಧ್ಯಮ ಪ್ರಕಟಣೆ ಸರ್ಕಾರ, ಸಿಎಂ ಇಮೇಜ್ ಕುಗ್ಗಿಸುವ ಕುತಂತ್ರ: ಸಚಿವ ಮಹದೇವಪ್ಪ ಆಕ್ರೋಶ

ಮೈಸೂರು: ಸಿಎಂ ಸಿದ್ದರಾಮಯ್ಯ ಹೆಸರು ಬಳಸಿ ಜಾರಿ ನಿರ್ದೇಶನಾಲಯ ಮಾಧ್ಯಮ ಪ್ರಕಟಣೆ ನೀಡಿರುವುದಕ್ಕೆ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ಮತ್ತು ಸಿದ್ದರಾಮಯ್ಯನವರ ಇಮೇಜ್ ಕುಗ್ಗಿಸುವ ಕುತಂತ್ರವಿದು. ಮುಡಾ ಪ್ರಕರಣದಲ್ಲಿ ಸಿಎಂಗೆ ಕಪ್ಪು ಚುಕ್ಕೆ ತರಲು ಹೀಗೆ ಮಾಡಿದ್ದಾರೆ. ಈ ರೀತಿ ಮಿಸ್ ಲೀಡ್ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾರಕ. ರಾಜ್ಯ ಸರ್ಕಾರದ ಇಮೇಜ್ ಗೆ ಮಸಿ ಬಳಿಯುವ ಪ್ರಯತ್ನವಿದು. ನಮ್ಮ ಲೀಗಲ್ ತಂಡ ಎಲ್ಲವನ್ನು ಪರಿಶೀಲನೆ ಮಾಡುತ್ತಿದೆ. ನಾವು ಕಾನೂನು ಬದ್ಧವಾಗಿಯೇ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read