ಬಡ ಕೈದಿಗಳಿಗೆ ಗುಡ್ ನ್ಯೂಸ್: ಜಾಮೀನು ಪಡೆದು ಜೈಲಿಂದ ಬಿಡುಗಡೆಯಾಗಲು ಕೇಂದ್ರದಿಂದ ಆರ್ಥಿಕ ನೆರವು

ನವದೆಹಲಿ: ಜಾಮೀನು ಪಡೆಯುವ ಅವಕಾಶವಿದ್ದರೂ ಅಗತ್ಯವಾದ ಹಣ ಕೊಡಲು ಸಾಧ್ಯವಾಗದೆ ಜೈಲಿನಲ್ಲೇ ಕೊಳೆಯುತ್ತಿರುವ ಕೈದಿಗಳ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ.

ಇಂತಹ ಕೈದಿಗಳ ಜಾಮೀನು ಹಣ ಪಾವತಿಗೆ 20 ಕೋಟಿ ರೂ.ಗಳನ್ನು ಕೇಂದ್ರ ಸಚಿವಾಲಯ ಬಿಡುಗಡೆ ಮಾಡಿದೆ. ಈ ಸಂಬಂಧ ರಾಜ್ಯಗಳಿಗೆ ಮಾರ್ಗಸೂಚಿ ಕೂಡ ನೀಡಲಾಗಿದೆ. ರಾಜ್ಯಗಳ ಪ್ರತಿ ಜಿಲ್ಲೆಯಲ್ಲೂ ಉನ್ನತ ಅಧಿಕಾರಿಗಳ ಸಮಿತಿ ಸ್ಥಾಪಿಸಬೇಕು. ರಾಜ್ಯಕ್ಕೆ ಒಬ್ಬರಂತೆ ನೋಡಲ್ಲ ಅಧಿಕಾರಿಗಳನ್ನು ನೇಮಕ ಮಾಡಲು ತಿಳಿಸಿದ್ದು, ನೋಡಲ್ ಅಧಿಕಾರಿಗಳು ಕೇಂದ್ರ ಗೃಹ ಇಲಾಖೆಯ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ನೋಡಲ್ ಅಧಿಕಾರಿಯೊಂದಿಗೆ ಸಂಪರ್ಕಿಸಿ ಕಾರ್ಯನಿರ್ವಹಿಸಲಿದ್ದಾರೆ.

ಈ ಮೂಲಕ ಜಾಮೀನು ಪಡೆಯುವ ಅವಕಾಶ ಇದ್ದರೂ ಅದಕ್ಕೆ ಅಗತ್ಯವಿರುವ ಹಣ ನೀಡಲು ಸಾಧ್ಯವಾಗದೆ ಜೈಲಿನಲ್ಲಿ ಉಳಿದ ಕೈದಿಗಳ ನೆರವಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read