BIG NEWS : ಬೆಂಗಳೂರಿನಲ್ಲಿ ಅಂತರ್ಜಲ ವೃದ್ಧಿಗೆ ಕ್ರಮ ; 50 ಕೆರೆಗಳಿಗೆ ಸಂಸ್ಕರಿತ ನೀರು ಭರ್ತಿ.!

ಬೆಂಗಳೂರು: ಬೆಂಗಳೂರು ನಗರದಲ್ಲಿ ಅಂತರ್ಜಲ ವೃದ್ಧಿಗೆ ಯೋಜನೆ ರೂಪಿಸಿರುವ ಬೆಂಗಳೂರು ಜಲಮಂಡಳಿ 50 ಕೆರೆಗಳಿಗೆ ಸಂಸ್ಕರಿತ ನೀರು ತುಂಬಿಸಲು ಯೋಜಿಸಿದೆ.

ಜಲಮಂಡಳಿಯ ತ್ಯಾಜ್ಯ ನೀರು ಸಂಸ್ಕರಣೆ ಘಟಕಗಳಿಂದ 18 ಕೆರೆಗಳಿಗೆ ಸಂಸ್ಕರಿತ ನೀರನ್ನು ತುಂಬಿಸಲಾಗಿದೆ. ಈ ಸಂಖ್ಯೆಯನ್ನು ಇದೀಗ 50 ಕೆರೆಗಳಿಗೆ ನಿಗದಿಗೊಳಿಸಿ, ಯೋಜನೆ ರೂಪಿಸಲಾಗುತ್ತಿದೆ.

ನಗರದಲ್ಲಿ ಈಗ ಮಳೆಯಾಗುತ್ತಿದ್ದು, ಕೆರೆಗಳು ನೈಸರ್ಗಿಕವಾಗಿ ತುಂಬುತ್ತಿವೆ. ಆದರೆ, ಎಲ್ಲ ಕಾಲದಲ್ಲೂ ಇದೇ ಪರಿಸ್ಥಿತಿ ಇರುವುದಿಲ್ಲ. ನಿಯಂತ್ರಿತ ಮಾದರಿಯಲ್ಲಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read