ಮಂಗಳೂರಿನಲ್ಲಿ ಕಟ್ಟೆಚ್ಚರ: ರಾತ್ರಿ 9:30ರೊಳಗೆ ಅಂಗಡಿ, ಹೋಟೆಲ್, ಮಳಿಗೆ, ಬಾರ್ ಮುಚ್ಚುವಂತೆ ಆದೇಶ

ಮಂಗಳೂರು: ಸುಹಾನ್ ಶೆಟ್ಟಿ ಕೊಲ್ ಬಳಿಕ ಮಂಗಳೂರಿನಲ್ಲಿ ಪ್ರತಿಕಾರದ ಬೆದರಿಕೆಗಳು ಹೆಚ್ಚಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಮುಖಂಡರು ಕೊಲ್ಲುವ ಬೆದರಿಕೆಗಳು ಹೆಚ್ಚುತ್ತಿವೆ. ಇದರಿಂದಾಗಿ ಪೊಲೀಸರು ಅಲರ್ಟ್ ಆಗಿದ್ದು, ಕಟ್ಟೆಚ್ಚರಕ್ಕೆ ಸೂಚಿಸಿದ್ದಾರೆ.

ಮಂಘಳೂರಿನಲ್ಲಿ ರಾತ್ರಿ 9:30ರೊಳಗೆ ಎಲ್ಲಾ ಅಂಗಡಿಗಳು, ಹೋಟೆಲ್, ಮಳಿಗೆ, ಬಾರ್ ಗಳನ್ನು ಮುಂಚ್ಚುವಂತೆ ಆದೇಶ ಹೊರಡಿಸಲಾಗಿದೆ.

ರಾತ್ರಿ 9:30ಕ್ಕೆ ಭರತ್ ಕುಮ್ಡೇಲ್ ನನ್ನು ಕೊಲ್ಲುವುದಾಗಿ ಸಂದೇಶ ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಕಟ್ಟ್ಟೆಚ್ಚರ ಕೈಗೊಂಡಿದ್ದಾರೆ. ರಾತ್ರಿ 9:30ರೊಳಗೆ ಎಲ್ಲಾ ಅಂಗಡಿ ಮುಂಗಟ್ಟು, ಹೋಟೆಲ್, ಬಾರ್ ಗಳನ್ನು, ಫುಟ್ ಪಾತ್ ಮೇಲಿನ ವ್ಯಾಪಾರವನ್ನು ಬಂದ್ ಮಾಡಿಸಲಾಗಿದೆ. ಜನರು ಬೇಗನೆ ಮನೆಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಮಂಗಳೂರಿನಲ್ಲಿ ಇನ್ನೂ ಕೆಲದಿನಗಳವರೆಗೆ ಇದೇ ರೀತಿ ಮುನ್ನೆಚ್ಚರಿಕೆ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read