ತೋಟದ ಮನೆಯಲ್ಲಿ ಘೋರ ಕೃತ್ಯ: ಅತ್ತಿಗೆ, ಅಣ್ಣನ ಮಗನ ಬರ್ಬರ ಹತ್ಯೆ

ಮಂಡ್ಯ: ಆಸ್ತಿ ವಿಚಾರಕ್ಕೆ ಕುಡುಗೊಲಿನಿಂದ ಕೊಚ್ಚಿ ಅತ್ತಿಗೆ ಮತ್ತು ಅಣ್ಣನ ಮಗನನ್ನು ಕೊಲೆ ಮಾಡಿದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ನಿನ್ನೆ ಸಂಜೆ ನಡೆದಿದೆ.

ಸತೀಶ್ ಎಂಬಾತ ಕೃತ್ಯವೆಸಗಿದ ಆರೋಪಿ. ಅತ್ತಿಗೆ ಶಾಂತಮ್ಮ ಮತ್ತು ಅಣ್ಣನ ಮಗ ಯಶವಂತ ಅವರನ್ನು ಕೊಲೆ ಮಾಡಿದ್ದಾನೆನ್ನಲಾಗಿದೆ.

ನಿನ್ನೆ ಸಂಜೆ ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಶಾಂತಮ್ಮ ಮತ್ತು ಯಶವಂತವರನ್ನು ಹತ್ಯೆ ಮಾಡಿದ್ದಾನೆ. ಕಂಠಪೂರ್ತಿ ಕುಡಿದು ಬಂದಿದ್ದ ಸತೀಶ್ ಅತ್ತಿಗೆ ಶಾಂತಮ್ಮನೊಂದಿಗೆ ಕಿರಿಕ್ ಮಾಡಿದ್ದ. ಮಾತಿಗೆ ಮಾತು ಬೆಳೆದು ಕುಡುಗೋಲಿನಿಂದ ದಾಳಿ ಮಾಡಿದ್ದಾನೆ. ಕೊಲೆಗೈದು ಪೊಲೀಸ್ ಠಾಣೆಗೆ ಬಂದು ಆರೋಪಿ ಸತೀಶ್ ಶರಣಾಗಿದ್ದಾನೆ. ಆರೋಪಿ ಸತೀಶ್ ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read