ಅತ್ತೆಯನ್ನೇ ಬರ್ಬರವಾಗಿ ಕೊಲೆ ಮಾಡಿದ ಅಳಿಯ

ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡದ ಚಿಟ್ಟಿನಗರ ಸಮೀಪ ವ್ಯಕ್ತಿಯೊಬ್ಬ ಅತ್ತೆಯನ್ನೇ ಕೊಲೆ ಮಾಡಿದ್ದಾನೆ.

ಚನುಮೋಳು ವೆಂಕಟರಾವ್ ಮೇಲ್ಸೇತುವೆ ಮೇಲೆ ಶನಿವಾರ ರಾತ್ರಿ ಘಟನೆ ನಡೆದಿದೆ. ನಾಗಮಣಿ(48) ಕೊಲೆಯಾದ ಮಹಿಳೆ. ಅಳಿಯ ರಾಜೇಶ್(37) ಅತ್ತೆಯನ್ನು ಕೊಲೆ ಮಾಡಿದ್ದಾನೆ. ಪತ್ನಿ ವಿಚ್ಛೇದನ ಕೋರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರಿಂದ ಕೋಪಗೊಂಡು ಇಂತಹ ಕೃತ್ಯವೆಸಗಿದ್ದಾನೆ ಎಂದು ವಿಜಯವಾಡ ಪಶ್ಚಿಮ ಎಸಿಪಿ ಹನುಮಂತ ರಾವ್ ಮಾಹಿತಿ ನೀಡಿದ್ದಾರೆ.

ವೈಎಸ್ಆರ್ ಕಾಲೋನಿ ಬ್ಲಾಕ್ ನಂಬರ್ 68 ರಲ್ಲಿ ನಾಗಮಣಿ ಕುಟುಂಬದವರು ವಾಸವಾಗಿದ್ದಾರೆ. ಅವರ ಎರಡನೇ ಪುತ್ರಿ ಲಲಿತಾರನ್ನು 15 ವರ್ಷದ ಹಿಂದೆ ರಾಜೇಶ್ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದು, ಕೌಟುಂಬಿಕ ಕಲಹದಿಂದ ಪೊಲೀಸರಿಗೆ ದೂರು ನೀಡಿದ್ದಾರೆ. ಒಂದು ವರ್ಷದ ಹಿಂದೆ ಲಲಿತಾ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದು, ಮುಂದಿನ ವಿಚಾರಣೆ ವೇಳೆ ವಿಚ್ಛೇದನ ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜೇಶ್ ಇಂತಹ ಕೃತ್ಯವೆಸಗಿದ್ದಾನೆ.

ಪತ್ನಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಅತ್ತೆ, ಮಾವನ ವಿರುದ್ಧ ಆಕ್ರೋಶಗೊಂಡಿದ್ದ ರಾಜೇಶ್ ಶನಿವಾರ ರಾತ್ರಿ ಪತಿ ಗುರುಸ್ವಾಮಿಯೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ನಾಗಮಣಿ ಮೇಲೆ ದಾಳಿ ಮಾಡಿದ್ದಾನೆ. ಹಿಂಬದಿ ಕುಳಿತಿದ್ದ ಅತ್ತೆ ನಾಗಮಣಿಗೆ ಚಾಕುವಿನಿಂದ ಇರಿದಿದ್ದಾನೆ. ಕುತ್ತಿಗೆ ಭಾಗದಲ್ಲಿ ಇರಿತವಾಗಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಮಾವ ಗುರುಸ್ವಾಮಿ ಕೊಲೆ ಮಾಡಲು ಬೆನ್ನಟ್ಟಿ ಹೋದ ರಾಜೇಶ್ ಅವರು ಸಿಗದಿದ್ದಾಗ ಪರಾರಿಯಾಗಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read