BREAKING: ಮಹಾರಾಷ್ಟ್ರ ಸಂಪುಟ ವಿಸ್ತರಣೆ: ಪಂಕಜಾ ಮುಂಡೆ ಸೇರಿ ನೂತನ ಸಚಿವ ಪ್ರಮಾಣವಚನ ಸ್ವೀಕಾರ

ಮುಂಬೈ: ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆಯಾಗಿದ್ದು ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ನಾಗ್ಪುರದ ರಾಜಭವನದಲ್ಲಿ ಮಹಾರಾಷ್ಟ್ರ ಸರ್ಕಾರದ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ,

ಬಿಜೆಪಿ, ಎನ್ಸಿಪಿ ಮತ್ತು ಶಿವಸೇನೆ ನಡುವೆ ಖಾತೆ ಹಂಚಿಕೆ ಬಳಿಕ ಇಂದು ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆದಿದ್ದು, ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದ್ದಾರೆ. ಸಮಾರಂಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಉಪ ಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ, ಅಜಿತ್ ಪವಾರ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿ ಹಲವು ನಾಯಕರು ಭಾಗವಹಿಸಿದ್ದರು.

ಚಂದ್ರಶೇಖರ ಬಾವನಕುಲೆ, ನಿತೇಶ್ ರಾಣೆ, ಶಿವೇಂದ್ರರಾಜ ಭೋಸಲೆ, ಚಂದ್ರಕಾಂತ ಪಾಟೀಲ, ಪಂಕಜ್ ಭೋಯಾರ್, ಮಂಗಲ್ ಪ್ರಭಾತ್ ಲೋಧಾ, ಗಿರೀಶ್ ಮಹಾಜನ್, ಜೈಕುಮಾರ್ ರಾವಲ್, ಪಂಕಜಾ ಮುಂಡೆ, ರಾಧಾಕೃಷ್ಣ ವಿಖೆ ಪಾಟೀಲ್, ಗಣೇಶ ನಾಯ್ಕ, ಮೇಘನಾ ಬೋರ್ಡಿಕರ್, ಮಾಧುರಿ ಮಿಸಾಲ್, ಅತುಲ್ ಸೇವ್, ಅಶೋಕ್ ಉಯಿಕೆ, ಜೈಕುಮಾರ್ ಮೋರೆ, ಸಂಜಯ್ ಸಾವ್ಕರೆ, ಆಶಿಶ್ ಶೆಲಾರ್, ಉದಯ್ ಸಮಂತ್, ಪ್ರತಾಪ್ ಸರ್ನಾಯಕ್, ಶಂಭುರಾಜ್ ದೇಸಾಯಿ, ಆಶಿಶ್ ಜೈಸ್ವಾಲ್, ಭರತ್ ಗೋಗಾವಲೆ ಸೇರಿ ಹಲವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read