SHOCKING: ಪ್ರೀತಿಸಿ ಮದುವೆಯಾದವನಿಂದಲೇ ಘೋರ ಕೃತ್ಯ: ಕತ್ತು ಕೊಯ್ದು ಪತ್ನಿ ಹತ್ಯೆ

ಮೈಸೂರು: ಕತ್ತು ಕೊಯ್ದು ಪತ್ನಿಯನ್ನು ಕೊಂದು ಪತಿ ಪೊಲೀಸರಿಗೆ ಶರಣಾದ ಘಟನೆ ಮೈಸೂರಿನ ಹೆಬ್ಬಾಳದ ಲಕ್ಷ್ಮಿಕಾಂತ ನಗರದಲ್ಲಿ ನಡೆದಿದೆ.

ಶ್ರುತಿ ಕೊಲೆಯಾದ ಮಹಿಳೆ. ಪತ್ನಿ ಕೊಲೆ ಮಾಡಿದ ಪತಿ ಅರುಣ್ ಪೊಲೀಸರಿಗೆ ಶರಣಾಗಿದ್ದಾನೆ. ಕೂರ್ಗಳ್ಳಿ ನಿವಾಸಿ ಶ್ರುತಿ ಮತ್ತು ಚಾಮರಾಜನಗರ ಮೂಲದ ಅರುಣ್ 4 ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ಬೇರೆ ಜಾತಿ ಹಿನ್ನೆಲೆ ಎರಡೂ ಮನೆಯವರ ಕಡೆ ಮದುವೆಗೆ ಒಪ್ಪಿಗೆ ಇರಲಿಲ್ಲ.

ಮದುವೆಯ ನಂತರ ಪೋಷಕರಿಂದ ಶ್ರುತಿ, ಅರುಣ್ ದಂಪತಿ ದೂರವಾಗಿದ್ದರು. ಯಾರ ಸಂಪರ್ಕವಿಲ್ಲದೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಸದ್ಯ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಮೈಸೂರಿನ ಹೆಬ್ಬಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read