ಪ್ರೀತ್ಸೆ ಎಂದು ಪುತ್ರಿಗೆ ಪೀಡಿಸುತ್ತಿದ್ದವನ ಕೊಂದ ಯುವತಿಯ ತಂದೆ

ತಿಪಟೂರು: ಪ್ರೀತಿಸುವಂತೆ ಪುತ್ರಿಯ ಹಿಂದೆ ಬಿದ್ದಿದ್ದ ವ್ಯಕ್ತಿಯನ್ನು ಯುವತಿಯ ತಂದೆ ಹತ್ಯೆ ಮಾಡಿ ಪೊಲೀಸರಿಗೆ ಶರಣಾಗಿದ್ದಾರೆ.

ತಿಪಟೂರಿನ ಚೇತನ್(25) ಕೊಲೆಯಾದ ವ್ಯಕ್ತಿ. ಲೋಕೇಶ್ ಕೊಲೆ ಆರೋಪಿಯಾಗಿದ್ದಾನೆ. ಪತ್ನಿಯಿಂದ ದೂರವಾಗಿದ್ದ ಚೇತನ್ ಆಲೂರು ಮೂಲದ ಯುವತಿಯ ಹಿಂದೆ ಬಿದ್ದು ಪ್ರೀತಿಸುವಂತೆ ಕಾಡುತ್ತಿದ್ದ. ಭಾನುವಾರ ಹಾಲ್ಕುರಿಕೆ ರಸ್ತೆಯ ಯುವತಿಯ ತಂದೆ ಲೋಕೇಶ್ ಅವರ ಅಂಗಡಿಯ ಬಳಿ ಹೋಗಿ ಜಗಳವಾಡಿದ್ದಾನೆ. ಮಗಳನ್ನು ಎಲ್ಲಿಗೆ ಕಳುಹಿಸಿದ್ದೀರಿ, ನನಗೆ ಮದುವೆ ಮಾಡಿಕೊಡಿ ಎಂದೆಲ್ಲ ಪೀಡಿಸಿದ್ದಾನೆ. ಈತನ ಕಾಟದಿಂದ ಆಕ್ರೋಶಗೊಂಡ ಲೋಕೇಶ್ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗ ಮೂಲದ ಯುವತಿಯನ್ನು ಪ್ರೀತಿಸಿ ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದ ಚೇತನ್ ದಂಪತಿಗೆ ಮೂರು ವರ್ಷದ ಹೆಣ್ಣು ಮಗು ಇದೆ. ಕೌಟುಂಬಿಕ ಕಲಹದಿಂದಾಗಿ ಚೇತನ್ ಪತ್ನಿ ತವರು ಮನೆ ಸೇರಿದ್ದಾರೆ. ಇನ್ನೂ ವಿಚ್ಛೇದನ ನೀಡಿಲ್ಲ.

ಪತ್ನಿ ತವರಿಗೆ ಹೋದ ನಂತರ ಲೋಕೇಶ್ ಅವರ ಮಗಳ ಹಿಂದೆ ಬಿದ್ದಿದ್ದ ಚೇತನ್ 2ನೇ ಮದುವೆಗೆ ಮುಂದಾಗಿದ್ದ. ಆತ ಅನ್ಯ ಜಾತಿಗೆ ಸೇರಿದ್ದು ಮತ್ತು ಬೇರೆ ಮದುವೆಯಾಗಿರುವುದರಿಂದ ಲೋಕೇಶ್ ದಂಪತಿ ಚೇತನ್ ಗೆ ಮಗಳನ್ನು ಕೊಟ್ಟು ಮದುವೆ ಮಾಡಲು ಒಪ್ಪಿಲ್ಲ. ಆಕೆಯನ್ನು ಬೇರೆ ಊರಿಗೆ ಕಳುಹಿಸಿದ್ದರು. ಇದು ಗೊತ್ತಾಗಿ ಲೋಕೇಶ್ ಅವರ ಅಂಗಡಿ ಬಳಿ ಹೋಗಿ ಗಲಾಟೆ ಮಾಡಿದಾಗ ಬಲವಾದ ಆಯುಧದಿಂದ ಹೊಡೆದು ಚೇತನ್ ನನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read