ಈ ವ್ಯಕ್ತಿಗಳ ಮೇಲಿರುತ್ತೆ ಶಿವನ ವಿಶೇಷ ಕೃಪೆ

ಅನಾದಿ ಕಾಲದಿಂದಲೂ ಭಗವಂತ ಶಿವ ತನ್ನ ಭಕ್ತರ ದುಃಖಗಳನ್ನು ಕಡಿಮೆ ಮಾಡುತ್ತ ಬಂದಿದ್ದಾನೆ. ಶಿವನ ಆರಾಧನೆಯಿಂದ ಕೇವಲ ನೋವು-ದುಃಖ ಕಡಿಮೆಯಾಗುವುದೊಂದೇ ಅಲ್ಲ ಮುಂದಿನ ಭವಿಷ್ಯ ಸುಖಕರವಾಗಿರುತ್ತದೆ. ಬೇಡಿ ಬಂದವರಿಗೆ ಇಲ್ಲ ಎನ್ನುವುದಿಲ್ಲ ಶಿವ. ಕೇಳಿದ್ದೆಲ್ಲ ನೀಡುವ ಶಂಕರನಿಗೆ ಭೋಲೇನಾಥ ಎಂದು ಕರೆಯಲಾಗುತ್ತದೆ.

ಶಿವನ ಅಸ್ತ್ರ ತ್ರಿಶೂಲ. ಈ ತ್ರಿಶೂಲಕ್ಕೂ ನಮ್ಮ ಅಂಗೈ ಹಾಗೂ ಪಾದದ ಮೇಲಿರುವ ರೇಖೆಗೂ ಸಂಬಂಧವಿದೆ. ಅಂಗೈ ಅಥವಾ ಅಂಗಾಲಿನ ರೇಖೆಯಲ್ಲಿ ತ್ರಿಶೂಲದ ಚಿಹ್ನೆಯಿದ್ದರೆ ಅಂತ ವ್ಯಕ್ತಿಯ ಮೇಲೆ ಶಿವನ ವಿಶೇಷ ಕೃಪೆಯಿರುತ್ತದೆ. ಈ ಬಗ್ಗೆ ಸಮುದ್ರಶಾಸ್ತ್ರದಲ್ಲಿ ವಿಸ್ತಾರವಾದ ಉಲ್ಲೇಖವಿದೆ.

ಹಸ್ತದ ರೇಖೆ ನಡುವೆ ತ್ರಿಶೂಲದ ಭಾಗ್ಯರೇಖೆಯಿದ್ದಲ್ಲಿ ಆ ವ್ಯಕ್ತಿ ಭಾಗ್ಯಶಾಲಿಯಾಗಿರುತ್ತಾನೆ.

ಹಸ್ತದ ಹೃದಯ ರೇಖೆಯ ಮೇಲೆ ಗುರು, ಪರ್ವತ ರೇಖೆಯ ಸಮೀಪ ತ್ರಿಶೂಲದ ರೇಖೆಯಿದ್ದಲ್ಲಿ ಅಂತ ವ್ಯಕ್ತಿಗಳಿಗೆ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ.

ಸೂರ್ಯರೇಖೆಯ ಬಳಿ ತ್ರಿಶೂಲ ರೇಖೆಯಿದ್ದರೆ ಸರ್ಕಾರಿ ಕ್ಷೇತ್ರದಲ್ಲಿ ಲಾಭ ಮತ್ತು ಉನ್ನತ ಸ್ಥಾನ ಪ್ರಾಪ್ತಿಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read