alex Certify ʼಎಮರ್ಜೆನ್ಸಿ ಅಲರ್ಟ್ ಮೆಸೇಜ್​ʼ ನೋಡಿ ಮೊಬೈಲ್‌ ಬಳಕೆದಾರರು ಕಂಗಾಲು; ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಎಮರ್ಜೆನ್ಸಿ ಅಲರ್ಟ್ ಮೆಸೇಜ್​ʼ ನೋಡಿ ಮೊಬೈಲ್‌ ಬಳಕೆದಾರರು ಕಂಗಾಲು; ಇಲ್ಲಿದೆ ಮಾಹಿತಿ

ಈಗಿನ ಜಮಾನದಲ್ಲಿ ವಾಟ್ಸಾಪ್​ ಬಳಕೆ ಮಾಡದವರ ಸಂಖ್ಯೆಯೇ ಕಡಿಮೆ. ಅಷ್ಟರ ಮಟ್ಟಿಗೆ ವಾಟ್ಸಾಪ್​​ ತನ್ನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಆದರೆ ನಾಗ್ಪುರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವಾಟ್ಸಾಪ್​ ಬಳಕೆದಾರರಿಗೆ ಇಂದು ಆಘಾತ ಕಾದಿತ್ತು. ತೀವ್ರವಾದ ತುರ್ತು ಎಚ್ಚರಿಕೆ ಎಂಬ ಸಂದೇಶವೊಂದನ್ನು ಅನೇಕರು ವಾಟ್ಸಾಪ್​​ನಲ್ಲಿ ಸ್ವೀಕರಿಸಿದ್ದು ಶಾಕ್​ ಆಗಿದ್ದಾರೆ. ಇದು ಕೇಂದ್ರ ದೂರಸಂಪರ್ಕ ಇಲಾಖೆ ನೀಡಿದ ಎಚ್ಚರಿಕೆಯ ಸಂದೇಶವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ. ಭಾರತೀಯರ ಟೆಲಿಕಾಂ ಇಲಾಖೆಯಿಂದ ವೈರ್​ಲೆಸ್​ ಸಂದೇಶವನ್ನು ನಾಗ್ಪುರ ಸೇರಿದಂತೆ ದೇಶದ ವಿವಿಧ ಭಾಗದ ಜನರಿಗೆ ಕಳುಹಿಸಲಾಗಿದೆ. ಭಾರೀ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಈ ಸಂದೇಶವನ್ನು ಕಳುಹಿಸಲಾಗಿದ್ದು ಸಾರ್ವಜನಿಕರಲ್ಲಿ ಗೊಂದಲವನ್ನುಂಟು ಮಾಡಿದೆ. ಇಂತಹ ಸಂದೇಶ ತಮಗೇಕೆ ಬಂತು ಎಂದು ವಾಟ್ಸಾಪ್​ ಬಳಕೆದಾರರು ಚಿಂತೆಗೆ ಒಳಗಾಗಿದ್ದಾರೆ. ಇದಾದ ಬಳಿಕ ಮಾಧ್ಯಮಗಳು ನಡೆಸಿದ ಸಂಶೋಧನೆಯಲ್ಲಿ ಪ್ರಾಥಮಿಕವಾಗಿ ಪ್ರತಿಕೂಲ ಹವಾಮಾನದ ಬಗ್ಗೆ ಎಚ್ಚರಿಕೆಯನ್ನು ನೀಡಲು ಈ ಸಂದೇಶ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಆದರೆ ಈ ಸಂದೇಶ ಯಾಕೆ ತಮ್ಮ ಮೊಬೈಲ್​ಗೆ ಬಂದಿದೆ ಎಂಬ ಅರಿವಿಲ್ಲದ ಅನೇಕರು ಗೊಂದಲಕ್ಕೆ ಒಳಗಾಗಿ ಈ ಸಂದೇಶವನ್ನು ಡಿಲೀಟ್​ ಮಾಡಿದ್ದಾರೆ. ಆದರೆ ಇನ್ನೂ ಕೆಲವರು ತೀವ್ರವಾದ ಬಿರುಗಾಳಿ ಸೇರಿದಂತೆ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯನ್ನು ಅನುಕರಿಸುವ ಪರೀಕ್ಷೆಯಾಗಿರಬಹುದು ಎಂದು ಊಹಿಸಲಾಗಿದೆ.

ಮತ್ತೊಂದು ವರದಿಯ ಪ್ರಕಾರ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್​ ಇಂಡಿಯಾ ದೇಶಾದ್ಯಂತ 20 ಕಡೆಗಳಲ್ಲಿ ಡ್ರೈವ್​ ಪರೀಕ್ಷೆ ನಡೆಸಿದೆ. ಧ್ವನಿ ಮತ್ತು ಡೇಟಾ ಸೇವೆಗಳಿಗಾಗಿ ಸೆಲ್ಯುಲಾರ್​ ಮೊಬೈಲ್​ ದೂರಾವಣಿ ಸೇವಾ ಪೂರೈಕೆದಾರರು ಒದಗಿಸುವ ನೆಟ್​ವರ್ಕ್​ನ ಗುಣಮಟ್ಟ ನಿರ್ಣಯಿಸಲು ಈ ಡ್ರೈವ್​ ಪರೀಕ್ಷೆ ನಡೆಸಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...