alex Certify BREAKING: ಕೋಟ್ಯಂತರ ರೂಪಾಯಿ ವಂಚನೆ: RTO ಅಧಿಕಾರಿ ಸೇರಿ ಮೂವರ ಬಂಧನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಕೋಟ್ಯಂತರ ರೂಪಾಯಿ ವಂಚನೆ: RTO ಅಧಿಕಾರಿ ಸೇರಿ ಮೂವರ ಬಂಧನ

ರಾಮನಗರ: ಹಳೇ ಟ್ರ್ಯಾಕ್ಟರ್ ಗಳಿಗೆ ಹೊಸ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ರಾಮನಗರದ ಆರ್ ಟಿಒ ಅಧಿಕಾರಿ ಸೇರಿದಂತೆ ಮೂವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಆರ್ ಟಿಒ ಅಧಿಕಾರಿ ಶಿವಕುಮಾರ್, ಎಸ್ ಡಿಎ ರಚಿತ್ ರಾಜ್ ಹಾಗೂ ಬ್ರೋಕರ್ ಸತೀಶ್ ಬಂಧಿತರು. ಬಂಧಿತರು ಸೀಜ್ ಮಾಡಲಾಗಿದ್ದ ಹಳೇ ಟ್ರ್ಯಾಕ್ಟರ್ ಗಳಿಗೆ ಹೊಸ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು. ಬರೋಬ್ಬರಿ 2 ಸಾವಿರ ಟ್ರ್ಯಾಕ್ಟರ್ ಗಳಿಗೆ ಹೊಸ ದಾಖಲೆ ನೀಡಿದ್ದರು.

ಮೂವರನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು, ಆರ್ ಟಿಒ ಶಿವಕುಮಾರ್, ಎಸ್ ಡಿಎ ರಚಿತ್ ರಾಜ್ ನಿವಾಸದ ಮೇಲೆ ದಾಳಿ ನಡೆಸಿದ್ದು, ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...