ಬಾರ್ ನಲ್ಲಿ ಗಲಾಟೆ, ಹಣ ವಸೂಲಿ: ಇಬ್ಬರು ಪೊಲೀಸರು ಸಸ್ಪೆಂಡ್

ಚಿಕ್ಕಮಗಳೂರು: ಬಾರ್ ನಲ್ಲಿ ಗಲಾಟೆ, ಗೂಡ್ಸ್ ವಾಹನ ಮಾಲೀಕನಿಂದ ಹಣ ವಸೂಲಿ ಮಾಡಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಪೊಲೀಸ್ ಕಾನ್ ಸ್ಟೆಬಲ್ ಗಳನ್ನು ಅಮಾನತು ಮಾಡಲಾಗಿದೆ.

ಕೊಪ್ಪ ಪೊಲೀಸ್ ಠಾಣೆಯ ಕಾನ್ ಸ್ಟೆಬಲ್ ಹೆಚ್.ಟಿ. ಉಮಾಶಂಕರ್, ಕಾನ್ ಸ್ಟೆಬಲ್ ಬಿ. ಸಿದ್ದೇಶ್ ಅವರನ್ನು ಕೊಪ್ಪ ಡಿವೈಎಸ್ಪಿ ಪಿ. ಅನಿಲ್ ಕುಮಾರ್ ಅಮಾನತು ಮಾಡಿದ್ದಾರೆ. ಉಮಾಶಂಕರ್ ಬಾರ್ ಒಂದರಲ್ಲಿ ಹಣದ ವಿಚಾರಕ್ಕೆ ಗಲಾಟೆ ಮಾಡಿ ಬಿಯರ್ ಬಾಟಲ್ ಒಡೆದು ಅಸಭ ವರ್ತನೆ ತೋರಿದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.

ಬಿ. ಸಿದ್ದೇಶ್ ಗೂಡ್ಸ್ ವಾಹನ ಅಡ್ಡಗಟ್ಟಿ ಮಾಲೀಕನಿಂದ ಒಂದೂವರೆ ಲಕ್ಷ ರೂ. ಜೊತೆಗೆ ಮದ್ಯ ಪಡೆದುಕೊಂಡ ಕಾರಣಕ್ಕೆ ಅಮಾನತು ಮಾಡಲಾಗಿದೆ. ಇವರಿಬ್ಬರೂ ಈ ಹಿಂದೆ ತರೀಕೆರೆ ಠಾಣೆಯಿಂದ ಕರ್ತವ್ಯ ಲೋಪ ಆರೋಪದಲ್ಲಿ ಅಮಾನತುಗೊಂಡು ಕೊಪ್ಪ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read